Total Pageviews

Saturday, November 24, 2018

ನಮ್ಮ ಕಾಂಕ್ರೀಟ್ ರಸ್ತೆ ಮತ್ತು ನಾವು.

ನಮ್ಮ ಕಾಂಕ್ರೀಟ್ ರಸ್ತೆ ಮತ್ತು ನಾವು..!

(ನಮ್ಮ ಕನಸಿನ ರಸ್ತೆಗಳ ಅಸಲಿಯತ್ತು)


    ಮುಂಡಗೋಡವನ್ನು ಒಂದಿಪ್ಪತ್ತು ವರ್ಷಗಳ ಹಿಂದೆ ನೋಡಿದ್ದರೆ ಆಗಿನ್ನೂ ರಸ್ತೆಗಳ ಅಭಿವೃದ್ಧಿ ಆಗಿರಲಿಲ್ಲ , ರಸ್ತೆ ಏನು ಯವಾದರಲ್ಲೂ ಸಹ ಮುಂಡಗೋಡ ಅಷ್ಟಕ್ಕಷ್ಟೇ. ಈಗಲೂ ಸಹ ಅಕ್ಕಪಕ್ಕದ ಊರಗಳಿಗೆ ಹೋಲಿಸದರೆ  ಮುಂಡಗೋಡ ಅಭಿವೃದ್ಧಿಯ ಪಥದಲ್ಲಿ ಅಷ್ಟಕ್ಕಷ್ಟೇ.. ಇರ್ಲಿ ಇವೆಲ್ಲದರ ಹಿಂದಿನ ಒಂದಿಷ್ಟು ರಸ್ತೆಯ ಕಥೆಗಳನ್ನ ನೋಡೋಣ. ಮೊದಲೆಲ್ಲ ಮುಂಡಗೋಡದ ಮುಖ್ಯ ಬೀದಿಗಳು ಮಾತ್ರ ಡಾಂಬರ್ ರಸ್ತೆಗಳನ್ನ ಕಂಡಿದ್ದು ಬಿಟ್ಟರೆ ಮಿಕ್ಕ ರಸ್ತೆಗಳೆಲ್ಲವು ಕಚ್ಚಾ ಮಣ್ಣಿನ ರಸ್ತೆಗಳೇ , ನಿಧಾನಕ್ಕೆ ಡಾಂಬರಿನ ರಸ್ತೆಗಳು ಬರುತ್ತಿದ್ದಂತೆ ಮುಂಡಗೋಡಿಗರಿಗೆ ಖುಷಿಯೋ , ಖುಷಿ ಯಾಕಂದ್ರೆ ರಸ್ತೆಯ ಮೇಲೆ ಡಾಂಬರನ್ನು ಸುರಿತಾ ಇರೋದನ್ನ ಕಂಡು. ಆದ್ರೆ ಏನೂ ಈ ಖುಷಿ ತುಂಬಾ ದಿನ ಉಳಿಯಲೇ ಇಲ್ಲ ಧೋ ಧೋ ಎಂದು ಧರೆಗೆ ಸುರಿದ ಮಳೆರಾಯ ಡಾಂಬರನ್ನು ಕೊಚ್ಚಿಕೊಂಡು ಹೋಗುತ್ತಿದ್ದ. ಅಗೊಂದು ಸತ್ಯದ ಅರಿವಾಗುವದರೊಳಗೆ ಅದಾಗಲೇ ಸಮಯ ಮಿಕ್ಕಿ ಹೋಗಿತ್ತು.. ಈ ಡಾಂಬರಿನ ರಸ್ತೆಯನ್ನು ಮಾಡುವದರಲ್ಲಿ ಏನೋ ಸರಿಯಾಗಿ ಇರಲ್ಲ , ಸಿಕ್ಕಾಪಟ್ಟೆ ಕಳಪೆ ಮಟ್ಟದ ರಸ್ತೆಗಳಿವು ಮತ್ತು ಇಲ್ಲೇನೋ ಅವ್ಯವಹಾರ ನಡೆಯುತ್ತದೆ ಎಂಬುದು ಖಾತ್ರಿಯಾಗಿ ಹೋಗಿತ್ತು . ಮತ್ತದೇ ನಾವೇ ಕಟ್ಟಿದ ನಮ್ಮದೇ ತೆರಿಗೆಯ ದುಡ್ಡು ಪ್ರತಿ ಮಳೆಗಾಲದಲ್ಲೂ ನೀರುಪಾಲು. ಇದಕ್ಕೆಲ್ಲ ಪರಿಹಾರ ಎಂಬಂತೆ ಈಗ ಕಾಂಕ್ರೀಟಿನಿ ರಸ್ತೆಗಳನ್ನು  ಮಾಡಲಾಗುತ್ತಿದೆ. ಈ ರಸ್ತೆಗಳು ಶಾಶ್ವತ ಹಾಗೂ ಡಾಂಬರಿನ ರಸ್ತೆಗಳಿಗಿಂತ ದುಪ್ಪಟ್ಟು ಬಾಳಿಕೆ ಬರುತ್ತದೆ ಎಂಬುದನ್ನು ನಂಬಿಸಲಾಗುತ್ತಿದೆ ಹೊರತು ಅದು ನಿಜವೋ ಸುಳ್ಳೋ ಎಂಬುವದನ್ನ ಕಾಲವೇ ಉತ್ತರಿಸಬೇಕು. ಹೌದು ಈ ಮಾತು ನಿಜವೇ ಅಂತ ಒಪ್ಪೊಣ. ಆದರೆ ಸಿಮೆಂಟಿನ ರಸ್ತೆಗಳನ್ನ ಮಾಡುವ ರೀತಿಯಲ್ಲೇ ಸರಿಯಾಗಿ ನಿರ್ವಹಣೆ ಮಾಡಿ ನಿರ್ಮಾಣ ಮಾಡಿದರೆ ಕನಿಷ್ಠ 50 ವರ್ಷವಾದರೂ ಬಾಳಿಕೆ ಬರುತ್ತೆ. ಆದರೆ ಸಿಮೆಂಟಿನ ರಸ್ತೆಗಳನ್ನ ನಿರ್ಮಾಣ ಮಾಡುವ ರೀತಿಯಲ್ಲೇ ನಿರ್ಮಾಣ ಮಾಡಲಾಗುತ್ತಿದೆಯೇ ಎಂಬುದು ಪ್ರಶ್ನೆ..? ಮಿತ್ರರೇ ನೆನಪಿರಲಿ ಈ ಡಾಂಬರಿನ ರಸ್ತೆಯ ನಿಮಿತ್ಯ ನಾವು ಕಟ್ಟಿದ ತೆರಿಗೆಯ ಅದೆಷ್ಟೋ ಕೋಟ್ಯಂತರ ರೂಪಾಯಿಗಳು ವ್ಯರ್ಥ ನೀರಿನ ಪಾಲಾಗಿವೆ . ಕಾಂಕ್ರೀಟಿನ  ರಸ್ತೆಯ ನಿರ್ಮಾಣದಲ್ಲಿ ಮತ್ತೆ ಹೀಗೆಯೇ ಆಗುವದು ಬೇಡ. ಈಗಲಾದರೂ ಜಾಗ್ರತವಾಗೋಣ ನಮ್ಮ ತೆರಿಗೆ ರೂಪದ ಹಣ ವ್ಯರ್ಥವಾಗುವ ಮುನ್ನ ತಡೆಯುವ ಪ್ರಯತ್ನ ಮಾಡೋಣ. ಹಾಗಾದರೆ ಬನ್ನಿ ಕಾಂಕ್ರೀಟಿನಿ ರಸ್ತೆಯ ನಿರ್ಮಾಣದ ಕುರಿತು ಅರಿಯೋಣ . 


ಕಾಂಕ್ರಿಟ್ ರಸ್ತೆಯ ಕಥೆ

ಯಾವದೇ ಒಂದು ಕೆಲಸಕ್ಕೆ ಒಟ್ಟು ಸರಕಾರದಿಂದ ಬಿಡುಗಡೆಯಾದ ಅನುದಾನದ ಮೊತ್ತಕ್ಕಿಂತ ಕನಿಷ್ಠ 20 ರಿಂದ 25%ನಷ್ಟು ಕಡಿಮೆ ದರದಲ್ಲಿ ಕಾಮಗಾರಿಯ ಟೆಂಡರ್ ನಿಗದಿಯಾಗುತ್ತೆ. ಅದರಲ್ಲಿ 15 % ಕನಿಷ್ಠ ರಾಜಕಾರಣಿಗಳು ಮತ್ತು ಅಧಿಕಾರಿಗಳ ಪಾಲಾಗುತ್ತದೆ. ಇನ್ನು ಕಡಿಮೆ ಎಂದರು 10% ನಷ್ಟು ಮೊತ್ತ ಕಾಮಗಾರಿ ಪಡೆದುಕೊಂಡವನ ಪಾಲಾಗುತ್ತದೆ. ನೆನಪಿರಲಿ ಇವೆಲ್ಲವೂ ಹೇಳಿದ್ದು ಕನಿಷ್ಠ ಮೊತ್ತದಲ್ಲಿ. ಒಟ್ನಲ್ಲಿ ಬಿಡುಗಡೆಯಾದ ಅನುದಾನದ ಒಟ್ಟು ಮೊತ್ತದ ಅರ್ಧದಷ್ಟು ಹಣ ಮಾತ್ರ ಕಾಮಗಾರಿಯಲ್ಲಿ ಬಳಕೆಯಾಗುತ್ತೆ . ಅಲ್ಲಿಯೂ ಸಹ ಅಸಮರ್ಥ ಕಾರ್ಯಾಗಾರ ಹಾಗೂ ಗುಣಮಟ್ಟದ  ಪರಿಣಾಮ 10% ನಷ್ಟು ಕೆಲಸ ವ್ಯರ್ಥ . ಹೆಚ್ಚು ಕಡಿಮೆ ನಾವು ಒಂದು ಅನುದಾನಿತ ಕಾಂಕ್ರೀಟ್ ರಸ್ತೆಯ 40% ನಷ್ಟು ಮಾತ್ರ ನಿರೀಕ್ಷಿಸಬಹುದು ಅಷ್ಟೇ.

ಇಂತಹ ಗುಣಮಟ್ಟದಲ್ಲಿ ನಡೆದ ಕಾಮಗಾರಿ ಐವತ್ತು ಆರವತ್ತು ವರ್ಷ ಬಾಳಿಕೆ ಬರತ್ತೆ ಅಂತ ಅನಿಸುತ್ತೆಯಾ..?

ಮೊದಲನೆಯದಾಗಿ ಯಾವದೇ ಕಾಂಕ್ರೀಟ್ ನಿರ್ಮಾಣವಾದರು ಸರಿ ಅದನ್ನ ಮೊನೊಲಿಥಿಕ್ ಕಾಸ್ಟಿಂಗ್ ( monolithic casting process) ನಿಯಮದಲ್ಲೇ ನಿರ್ಮಿಸಬೇಕು . ಇದರ ಅರ್ಥ ಸ್ಪಷ್ಟವಾಗಿದೆ ಕಾಂಕ್ರೀಟ್ ಅನ್ನು ಒಂದೇ ಬಾರಿಗೆ ಮಾಡಿ ಮುಗಿಸಬೇಕು. ಒಮ್ಮೆ ಕಾಂಕ್ರೀಟ್ ನಿರ್ಮಾಣವಾಯುತೆಂದರೆ ಆಮೇಲೆ ಅದನ್ನ ಗಟ್ಟಿಗೊಳಿಸುವ ಪ್ರಕಿಯೆಯಾಗಲಿ ಅಥವಾ ಅದನ್ನ ಬದಲಾವಣೆ ಅಥವಾ ಮರುಕಾಮಗಾರಿಯಗಲಿ ಎಲ್ಲವೂ ವ್ಯರ್ಥ. ಒಮ್ಮೆ ಕಾಂಕ್ರೀಟ್ ನಿರ್ಮಾಣವತೆಂದರೆ 21 ದಿನಗಳ ಕಾಲ ಅದನ್ನು ನೀರುಣಿಸಬೇಕು. (curing process ) . ಇನ್ನು ಕಾಂಕ್ರೀಟ್ ಹಾಕುವಾಗ ಬಳಸುವ ಜೆಲ್ಲಿ ಕಲ್ಲು (ಖಡಿ) , ಮರಳು ಹಾಗೂ ಸಿಮೆಂಟಿನ ಮಿಶ್ರಣಕ್ಕೂ ಸಹ ಅದರದೇ ಆದ ರೀತಿ ನಿಯಮಗಳಿವೆ .ಮನಸ್ಸಿಗೆ ಬಂದಂತೆ ಮಿಶ್ರಣಗಳನ್ನ ಮಾಡಿ ಕಾಂಕ್ರೀಟುಗಳನ್ನ ಹಾಕುವದಲ್ಲ . ಕಾಂಕ್ರೀಟಿನ ಮಿಶ್ರಣಗಳು M10 ನಿಂದ M70 ವರೆಗಿನ ಶ್ರೇಣಿಗಳಲ್ಲಿ ಇವೆ . ಉದಾಹರಣೆಗೆ  M20 ಕಾಂಕ್ರೀಟ್ ಎಂದರೆ 1(ಸಿಮೆಂಟು):1.5(ಮರಳು):3(ಜೆಲ್ಲಿ ಕಲ್ಲು) ಅನುಪಾತದಲ್ಲಿ ಮಿಶ್ರಣ ಮಾಡಬೇಕು . ಮನೆಗಳ ನಿರ್ಮಾಣಕ್ಕೆ ಹೆಚ್ಚಾಗಿ ಬಳಸುವದು M20 ಕಾಂಕ್ರೀಟು. ಮನೆಯ ನಿರ್ಮಾಣದ M20 ನೆ ಇಷ್ಟು ಬಾಳಿಕೆ ಮತ್ತು ಘಟ್ಟಿಯಾಗಿ ಬರುತ್ತೆ ಅಂದರೆ ಯೋಚಿಸಿ ರಸ್ತೆಯ ನಿರ್ಮಾಣಕ್ಕೆ ಬಳಸುವದು M25 ಮತ್ತು ಅದಕ್ಕೂ ಹೆಚ್ಚಿನ ಶ್ರೇಣಿಯನ್ನ. ಈಗೊಂದು ಪ್ರಶ್ನೆ ನಿಮ್ಮಲ್ಲಿ ಏಳತ್ತೆ ಕೆಲಸ ಮಾಡುವವನಿಗೆ ಇದೆಲ್ಲವನ್ನು ನೋಡುವ ಪುರಸೊತ್ತು ಎಲ್ಲಿರುತ್ತೆ ಅಂತ. ಇಂತವೆಲ್ಲ ವಿಚಾರಗಳನ್ನು ನೋಡಿಕೊಳ್ಳಲೆಂದೇ ಪ್ರತಿ ಪ್ರೊಜೆಕ್ಟ್ ಗೂ ಸಹ ಒಬ್ಬ ಟೆಕ್ನಿಕಲ್ (technical) ಮನುಷ್ಯ ಇರುವದು ಕಡ್ಡಾಯ. ಮುಂದಿನ ಬಾರಿ ನಿಮ್ಮ ಮನೆಯ ಮುಂದೆ ಅಥವಾ ಇನ್ನೆಲ್ಲೋ ಕೆಲಸ ನಡೆಯಬೇಕಾದರೆ ತಪ್ಪದೆ ಕೇಳಿ ಎಲ್ಲಿ ಟೆಕ್ನಿಕಲ್ ಟೀಮು ಅಂತ..? ಒಮ್ಮೆ ನನ್ನ ಮನೆಯ ಮುಂದೆ ಕಾಂಕ್ರೀಟಿನ ರಸ್ತೆ ನಿರ್ಮಾಣವಾಯಿತು ಅಂದ್ರೇ ಮತ್ತೆ ನನ್ನ ಜೀವಮಾನಪೂರ್ತಿ ರಸ್ತೆಯ ನಿರ್ಮಾಣವಾಗುವದನ್ನು ನಾನು ನೋಡಬಾರದು. ಇವತ್ತಿನ ದಿನಗಳಲ್ಲಿ ಹೀಗೆ ಆಗುದಕ್ಕೆ ಸಾಧ್ಯ ಇದೆಯಾ..? ಕಾಂಕ್ರೀಟಿನ ರಸ್ತೆಯ ನಿರ್ಮಾಣದಲ್ಲಿ ಇಷ್ಟೇ ಇಂಚಿನ ದಪ್ಪದಾಗಿರಬೇಕು ಎಂಬ ನಿಯಮ.  ಇಲ್ಲಿಯೂ ಸಹ ಏನಾಗತ್ತೆ ಗೊತ್ತಾ ಉದಾಹರಣೆಗೆ 8 ಇಂಚಿನ ಕಾಂಕ್ರೀಟ್ ರಸ್ತೆ ಎಂದುಕೊಳ್ಳೋಣ  ಎರಡು ಬದುಯಲ್ಲಿ ರಸ್ತೆ 8 ಇಂಚಿನ  ಎತ್ತರ ತೋರಿಸಿ ಆದರೆ ರಸ್ತೆಯ ಮಧ್ಯೆದಲ್ಲಿ 6 , 7 ಅಥವಾ ಇನ್ನು ಕಡಿಮೆ ಎತ್ತರದ ಕಾಂಕ್ರಿಟವನ್ನು ಹಾಕಲಾಗುತ್ತೆ. ಇಲ್ಲಿ ಇನ್ನೊಂದು ಕಡ್ಡಾಯವಾಗಿ  ಗಮನಿಸಲೇ ಬೇಕಾದ ಸಂಗತಿ ಏನೆಯೆಂದರೆ , ಒಳಚರಂಡಿ , UG ಕೇಬಲ್ ಹಾಗೂ ನೀರಿನ ಪೈಪುಗಳ ಕೆಲಸ ಕಾಂಕ್ರೀಟ್ ರಸ್ತೆಯ ನಿರ್ಮಾದಣ ಮೊದಲೇ ಆಗಬೇಕು, ಇಲ್ಲವಾದಲ್ಲಿ ಇವಗಳ ನೆಪ ಇಟ್ಟು ನಿರ್ಮಿಸದ ರಸ್ತೆಗಳನ್ನು ಒಡೆದು ಅಲ್ಲಿ ಇನ್ನಿಷ್ಟು ಹಣದ ವ್ಯರ್ಥ ಪೋಲಾಗುವದಲ್ಲದೆ , ನಿಮ್ಮ ರಸ್ತೆಯ ಕಥೆಯೂ ಹರೋ ಹರ ಆಗಿರತ್ತೆ. ಇವೆಲ್ಲ ಸತ್ಯದ ಅರಿವಾಗುತ್ತಿದ್ದಂತೆ ಬೆಂಕಿ ಹತ್ತಿದಂತೆಯಾಗುತ್ತದೆಯಲ್ಲವೇ. ಖಂಡಿತವಾಗಿಯೂ ಆಗಲೇ ಬೇಕು ಯಾಕಂದ್ರೆ ವ್ಯರ್ಥವಾಗುತ್ತಿರುವದು ನಮ್ಮ ದುಡ್ಡಲ್ಲವೆ. ಮಿತ್ರರೇ ಯೋಚಿಸಿ ಇಷ್ಟು ವರ್ಷಗಳ ಕಾಲ ಹೀಗೆಯೇ ಮೋಸ ಹೋಗಿದ್ದೀವಿ ನಾವು ಹೀಗೆಯೇ ಬೇರೆ ಬೇರೆ ರೀತಿಯಲ್ಲಿ ವಂಚಿಸಿ ನಮ್ಮನ್ನ ಕೊಳ್ಳೆ ಹೊಡೆದು ಬಿಟ್ಟಿದ್ದಾರೆ. ಇಲ್ಲಿ ಹೇಳಿದ ಯಾವ ಸಂಗತಿಗಳು ಸಹ ಯಾರಿಗೂ ತಿಳಿಯದೆ ಇರುವಂತ ಸಂಗತಿಗಳೇನಲ್ಲ. ಯಾವದೇ ಒಬ್ಬ ಸಿವಿಲ್ ಇಂಜಿನಿಯರ್ ಅಥವಾ ಸಿವಿಲ್ ಡಿಪ್ಲೊಮಾ ಓದಿದ ವಿದ್ಯಾರ್ಥಿಗಳನ್ನ ನಿಲ್ಲಿಸಿ ಒಂದೈದು ನಿಮಿಷ ನಿಲ್ಲಿಸಿ ಕೇಳಿದರೆ ಆತ ಎಲ್ಲವನ್ನು ನಿಮಗೆ ತಿಳಿಸಿಕೊಟ್ಟುಬಿಡುತ್ತಾನೆ.ಯಾವದೇ ಕಾಮಗಾರಿಯಾದರು ಸರಿ ಟೆಂಡರ್ ಪಡೆದವನ ಹಾಗೂ ಕಾಮಗಾರಿಯ ಎಲ್ಲ ವರದಿಗಳನ್ನು ಪಡೆಯುವ ಅಧಿಕಾರ ನಮಗೆಲ್ಲರಿಗೂ ಇದೆ.  ಈಗಲಾದರೂ ಎಚ್ಚರವಾಗೋಣ ನಮ್ಮವರಿಂದಲೇ ನಾವು ಲೂಟಿಯಾಗೋದನ್ನ ಮೋಸ ಹೋಗುವದನ್ನ ನಿಲ್ಲಿಸೋಣ.

Sunday, November 4, 2018

ಗೋವೆಯಲ್ಲಿ ರಥಯಾತ್ರೆ - Chicago_125

ಪ್ರತಿ ಬಾರಿ ಇಂತದ್ದೊಂದು ಕಾರ್ಯಕ್ರಮ ನಡೆದಾಗ.  ಮತ್ತೆ ಮತ್ತೆ ನೆನಪಾಗೋದು , ಕಳೆದ 4 ವರ್ಷಗಳ ಹಿಂದೆ ಚಕ್ರವರ್ತಿ ಅಣ್ಣನ ಜೊತೆ ದೂರವಾಣಿಯಲ್ಲಿ ಮಾತನಾಡಿದ ಮೊದಲ ಸಂಭಾಷಣೆ , ಚಕ್ರವರ್ತಿ ಅಣ್ಣನ ಭಾಷಣಗಳ ಮೂಲಕ ವಿವೇಕಾನಂದರ ಪ್ರಭಾವಕ್ಕೆ ಒಳಗಾದ ನಾನು ,ಮೊದಲ ಬಾರಿ ಮಾತನಾಡುವಾಗ ಅಣ್ಣಾ ನಾನು ನಿಮ್ಮ ಜೊತೆ ಕೆಲಸ ಮಾಡಬೇಕು ಆದ್ರೆ ನಾನು ಇರೋದು ಗೋವಾನಲ್ಲಿ ಆಗತ್ತ ಅಂತ ಕೇಳಿದ್ದೆ. ಅದಕ್ಕೆ ಅಣ್ಣಾ ಕೊಟ್ಟ ಉತ್ತರ ಎಲ್ಲಿದ್ದರೆ ಏನಪ್ಪಾ ಎಲ್ಲರೂ ಒಟ್ಟಾಗೋಣ ಒಟ್ಟಾಗಿ ಕೆಲಸ ಮಾಡೋಣ ಎಂದ ಮಾತು, ಒಟ್ಟಾಗಿ ಸೇರಿಸಿ ನನ್ನ ಇಷ್ಟೂ ದೂರ ತಮ್ಮ ಜೊತೆ ಸೇರಿಸಿ ಕರೆದೊಯ್ಯುತ್ತಾರೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ರಥಯಾತ್ರೆ ಶುರುವಾಗಿ ಒಂದು ತಿಂಗಳಾಗಿರಬಹುದು ಅಣ್ಣಾ ಕರೆ ಮಾಡಿ ನಿನಗೊಂದು ಚಾಲೆಂಜ್ ಕೊಡ್ತೀನಿ ಗೋವೆಯಲ್ಲಿ ರಥಯಾತ್ರೆ ಮಾಡಬೇಕು.
ಇಲ್ಲಿಂದಲೇ ನೋಡಿ ಚಿಂತೆ ಶುರುವಾಗಿದ್ದು ನಾನ್ ಒಬ್ಬನೇ ಅದ್ ಹೇಗ್ ಮಾಡೋಕೆ ಸಾಧ್ಯ..? ಆಗತ್ತ..? ಹೇಗ್ ಮಾಡೋದು..? ಹೀಗೆ ಹತ್ತಾರು ಪ್ರಶ್ನೆಗಳು ನನ್ನಲ್ಲಿಯೇ ಓಡಾಡತೊಡಗಿದ್ದವು. ಅದೊಂದು ರೂಢಿಯಾಗಿಬಿಟ್ಟಿದೆ ನೋಡಿ ಅದ್ಯಾವ ಕಷ್ಟಗಳಿಗೂ ಸಿಲುಕಿದರು ಎಲ್ಲವನ್ನು ಗುರುಮಹಾರಾಜರಿಗೆ ಅರ್ಪಿಸಿ ತಣ್ಣಗಾಗಿ ಬಿಡುವುದು. ಅಂತೆಯೇ ಎಲ್ಲವನ್ನು ಅರ್ಪಿಸಿ ಕುಳಿತುಬಿಟ್ಟೆ. ಎಲ್ಲ ದಾರಿಯು ಸಹ ಗುರುಮಹಾರಾಜರೆ ತೋರುವರು ಎಂಬ ನನ್ನ ಭರವಸೆ ಮತ್ತೊಮ್ಮೆ ಸುಳ್ಳಾಗಲಿಲ್ಲ. ಮೊದಲ ಬಾರಿ ಗೋವೆಯ ಒಟ್ಟು ಕನ್ನಡ ಸಂಘಟನೆಗಳು (35) ಯಾವದಾದರು ಒಂದು ಕಾರ್ಯಕ್ರಮಕ್ಕೆ ಒಂದಾಗಿದ್ದರೆ ಅದು ವಿವೇಕ ರಥಯಾತ್ರೆ. ಇನ್ನೂ ಕನ್ನಡ ಸಂಘಟನೆಗಳ ಜೊತೆ ಸ್ಥಳೀಯ ಸಂಘಟನೆಗಳು ಒಂದಾಗಿ ಮಾಡಿದ ಕಾರ್ಯಕ್ರಮವೆಂದರೆ ಅದು ವಿವೇಕ ರಥಯಾತ್ರೆ. ಎಲ್ಲ ಕನ್ನಡ ಸಂಘಟನೆಗಳು ಒಟ್ಟಾಗಿ ಉತ್ತರ ಗೋವೆ ಮತ್ತು ದಕ್ಷಿಣ ಗೋವೆಯ ಜವಾಬ್ದಾರಿಯನ್ನ ಹಂಚಿಕೊಂಡರೆ , ಪಣಜಿಯ ಕಾರ್ಯಕ್ರಮದ ಜವಾಬ್ದಾರಿಯನ್ನ ವಿವೇಕ ಜಾಗ್ರತ ಬಳಗ ಹಾಗೂ ಪರಂಪರೆ ಪ್ರತಿಷ್ಠಾನ ವಹಿಸಿಕೊಂಡಿತ್ತು. ಇನ್ನೂ  ಕಾರ್ಯಕ್ರಮದ ರೂಪುರೇಷೆ ಹೇಗೆ ರಥಯಾತ್ರೆ ಶುರುವಾಗಬೇಕಿತ್ತು ಎನ್ನುವದರ ಕುರಿತು ತಯಾರಿಯಾಗಬೇಕಿತ್ತು , ವಿವೇಕಾನಂದರು ಹೆಜ್ಜೆ ಇಟ್ಟ ಹಾದಿಯನ್ನು ಹುಡುಕಾಡಬೇಕಿತ್ತು . ಇವೆಲ್ಲ ಕಾರ್ಯಕ್ಕೆ ಒಟ್ಟಾದವರು ನಮ್ಮ Ramdas Haldipur ಮತ್ತು Manju YB ರಥಯಾತ್ರೆ ಇನ್ನೊಂದು ವಾರವಿದೆ ಎನ್ನುವಾಗ ಶುರುವಾದ ನಮ್ಮ ತಯಾರಿ ಹೇಗೆ ಬೆಳಗಾಗುತ್ತಿತ್ತೋ ಹೇಗೆ ರಾತ್ರಿಯಾಗುತ್ತಿತ್ತೋ ಎಂಬುದರ ಅರಿವೇ ಆಗುತ್ತಿರಲಿಲ್ಲ. ನಿರಂತರ ಸುತ್ತಾಟ ನಡಿದೆ ಇತ್ತು. ಅಂತೂ ಎಲ್ಲ ಪ್ರಯತ್ನಗಳ ನಂತರ ಒಂದು ಅಂತಿಮ ರೂಪರೇಷೆ ನಡೆದು ರಥ ಗೋವೆಗೆ ಬರುವ ದಿನ ಆಕ್ಟೊಬರ್ 29 ಬಂದೆ ಬಿಟ್ಟಿತ್ತು.

ಅಕ್ಟೋಬರ್ 29ರ ಬೆಳಗ್ಗೆ ಬಾಗಲಕೋಟೆಯ ಮೂಲಕ ಹೊರಟ ರಥ ಬೆಳಗಾವಿ ಮಾರ್ಗವಾಗಿ ಮಧ್ಯಾಹ್ನ 3 ಘಂಟೆಯ ಹೊತ್ತಿಗೆ ಗೋವೆಯೊಳಗೆ ಬಂದು ತಲುಪಿತ್ತು. ಮೊದಲೇ ಗೋವೆಯಲ್ಲಿನ ಚಿಕ್ಕ ಚಿಕ್ಕ ರಸ್ತೆಗಳು ಎಲ್ಲಿ ರಥ ಯಾವ ದಾರಿಯಲ್ಲಿ ನಿಂತುಬಿಡತ್ತೋ ಎಂಬ ಚಿಕ್ಕ ಭಯ ಇದ್ದೆ ಇತ್ತು. ಇನ್ನೇನೂ ಬಿಚೋಲಿ ತಲುಪಬೇಕು ಎನ್ನುವದರಲ್ಲಿ ಬ್ರಿಡ್ಜ್ ಒಂದು ಅಡ್ಡಗಟ್ಟಿಯೇ ಬಿಟ್ಟಿತ್ತು. ಸಂಜೆ ತುಂಬು  ದಟ್ಟ ಸಂಚರಣೆಯ ಸಮಯ ರಸ್ತೆಗಳೆಲ್ಲ  ಹಾದಿಕಟ್ಟಿ ಗಾಡಿಗಳು ನಿಂತುಬಿಟ್ಟಿದ್ದವು ಅವನ್ನೆಲ್ಲ ಸಂಭಾಳಿಸಿ ರಥವನ್ನ ತಿರುಗುಸಿ ಇನ್ನೊಂದು ರಸ್ತೆಯ ಮೂಲಕ ಸಾಗಿವಸುವಲ್ಲಿ ಸಂಜೆ ಸಮಯ ಏಳು ಘಂಟೆ . ಇದೆಲ್ಲವೂ ಸಾಧ್ಯವಾಗಿದ್ದು ನಮ್ಮ ಸಾರಥಿಯಿಂದ.
 ಮೂವತ್ತನೆ ತಾರೀಖು ಸಂಜೆ ನಾಲ್ಕು ಘಂಟೆಗೆ ಶುರುವಾದ ಮೊದಲ ಕಾರ್ಯಕ್ರಮ ಬಿಚೋಲಿಯ ಪಟ್ಟಣದೆಲ್ಲ ಬೈಕ್ ರ್ಯಾಲಿಯ ಮೂಲಕ ಶೋಭಾಯಾತ್ರೆ ಮುಗಿಸಿ ಪಟ್ಟಣದ ಮಧ್ಯಭಾಗದಲ್ಲಿರುವ ಶಾಂತಾದುರ್ಗಾ ಶಾಲೆಯ ಆವರಣದಲ್ಲಿ ಸಭಾಕಾರ್ಯಕ್ರಮಕ್ಕೆ ಬಂದು ತಲುಪಿತು. ಚಕ್ರವರ್ತಿ ಅಣ್ಣನ ಮಾತುಗಳನ್ನ ಕನ್ನಡದಲ್ಲಿ ಕೇಳುವದು ಸಹಜ ಆದರೆ ಹಿಂದಿಯಲ್ಲಿ ಕೇಳಲು ಅದೇನೋ ಹೊಸ ಹುರುಪು ಮನೆಮಾಡಿತ್ತು. ಅತ್ಯಂತ  ಅಚ್ಚುಕಟ್ಟಾಗಿ ಕಾರ್ಯಕ್ರಮ ಹಾಗೂ ಎಲ್ಲ ವ್ಯವಸ್ಥೆಗಳ ನಂತರ ರಥ ರಾತ್ರಿ ಪೊಂಡಾದ ರಾಮಕೃಷ್ಣ ಆಶ್ರಮಕ್ಕೆ ಬಂದು ತಲುಪಿತು.

ಮೂವತ್ತೊಂದನೆ ತಾರೀಖು ಬೆಳಗ್ಗೆ 8 ಘಂಟೆಗೆ ಮಂತ್ರೋಚ್ಚಾರಣೆಯ ಹಾಗೂ ಮಠದ ಗುರುಗಳ ಪೂಜೆಯ ನಂತರ ಪೊಂಡಾದ ವಿಠ್ಠಲ ಮಂದಿರದಿಂದ ಸರಸ್ವತಿ ಮಂದಿರದವರೆಗೆ ವಾದ್ಯಗಳೊಂದಿಗೆ ,ಸ್ಥಳೀಯರ ಸಹಕಾರದಲ್ಲಿ ಶೋಭಾಯಾತ್ರೆ ಸಾಗಿತು , ವಿಠ್ಠಲ ಮಂದಿರ ತಲಪುವ ಮೊದಲೇ ಮಡಗಾಂವ್ ನ ಸಂಘಟಕರು ರಥದ ಸ್ವಾಗತಕ್ಕೆ ಕಾದೂ ಕುಳಿತಿದ್ದರು  . ಸರಸ್ವತಿ ಮಂದಿರದಲ್ಲಿ ಪೂಜೆಯನ್ನು ನಡೆಸಿ ರಥ ಪೊಂಡಾದಿಂದ ಮಡಗಾಂವನ ಮೊದಲೇ ನಿಗದಿ ಪಡಿಸಿದ ಆಯೋಜನೆಯಂತೆ ರಥ ಚಿನ್ಮಯಿ ಮಿಷನ್ ಗೆ ತಲುಪಿತು. ಅಲ್ಲಿ ರಥವನ್ನ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ಅಲ್ಲಿನ ಸ್ವಾಮಿಜಿ ಶ್ರೀ ನಿಖಿಲಾನಂದ ಮಹಾರಾಜರು ತಾವೇ ಮುಂದೆ ನಿಂತು ರಥದ ಪೂಜೆಯನ್ನ ನೆರವೇರಿಸಿದರು . ನಂತರ ಅಲ್ಲಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಅಣ್ಣಾ ಮತ್ತೊಮ್ಮೆ ಹಿಂದಿಯಲ್ಲಿ ತಮ್ಮ ಭಾಷಣವನ್ನ ನೀಡುತ್ತಾ ಗೋವೆಯಲ್ಲಿ ಸ್ವಾಮೀಜಿಯ ಹೆಜ್ಜೆಗಳನ್ನ ಅತ್ಯಂತ ಸುಂದರವಾಗಿ ವಿವರಿಸಿದರು . ಕೊನೆಯಲ್ಲಿ ರಥದ ನಿರ್ವಾಹಕರು ಮತ್ತು ಬ್ರಿಗೇಡಿನ ಕಾರ್ಯಕರ್ತರು ಶ್ರೀ ನಿಖಿಲಾನಂದ ಮಹಾರಾಜರ ಆಶೀರ್ವಾದನ್ನ ಪಡೆದು ,ರಥ ಮಡಗಾಂವನ ಪಟ್ಟಣದಲ್ಲಿ ರ್ಯಾಲಿಯ ಮೂಲಕ ಸ್ವಾಮಿ ವಿವೇಕಾನಂದರೂ ಉಳಿದುಕೊಂಡ ದಾಮೋದರ್ ಸಾಲ್ ನಲ್ಲಿ ತಲುಪಿತ್ತು . ಅಲ್ಲಿನ ದೇವಸ್ಥಾದ ಮತ್ತು ಆ ಮನೆಯ ಪರಿವಾರದರೆಲ್ಲ ಒಟ್ಟಾಗಿ ರಥವನ್ನ ಸ್ವಾಗತಿಸಿದರಲ್ಲದೆ ಸ್ವಾಮೀಜಿ ಇದ್ದ ಕೋಣೆಯನ್ನ ಅವರು ಬಳಸಿದ ವಸ್ತುಗಳನ್ನ ಅತಿ ಪ್ರೀತಿಯಿಂದ ತೋರಿಸಿದರು. ಅಲ್ಲಿಂದ ಹೊರಟ ರಥಯಾತ್ರೆ ಪಟ್ಟಣದ ರಾಘವೇಂದ್ರ ಮಠಕ್ಕೆ ತಲುಪಿದಾಗ ರಥಕ್ಕೆ ಅರತಿಯನ್ನ ಬೆಳಗುವದರ ಮೂಲಕ ಪೂಜೆ ಮಾಡಿ ರಥವನ್ನ ಸ್ವಾಗತಿಸಿದರು. ಅಲ್ಲಿಂದ ಸಂಜೆ ವಾಸ್ಕೊದ ಜುವಾರಿನಗರಕ್ಕೆ ರಥ ತಲುಪಿತು, ಇಲ್ಲಿ ಸಿಕ್ಕಂತ ಭವ್ಯವಾದ ಸ್ವಾಗತ ಅದ್ಭುತವಾಗಿತ್ತು ,ಡೊಳ್ಳು , ಸ್ಕೌಟ್ಸ್ ಹುಡುಗರು , ವಾದ್ಯ ಹಾಗೂ ಕುಂಬದ ಮೂಲಕ ಅದ್ದೂರಿಯಾದ ಸ್ವಾಗತದ ಮೂಲಕ ರಥ ಕಾರ್ಯಕ್ರಮ ನಡೆಯುವ ಜಾಗಕ್ಕೆ ತಲುಪಿತೂ .ಅಲ್ಲಿ ಚಕ್ರವರ್ತಿ ಅಣ್ಣನ ಭಾಷಣವನ್ನ ಅತಿ ಉತ್ಸುಕತೆಯಿಂದ ಕೇಳಿದ ಜನ ಅಂತೂ ಎರಡನೇ ದಿನದ ರಥಯಾತ್ರೆ ಈ ಕಾರ್ಯಕ್ರಮದ ಮೂಲ ಮುಕ್ತಾಯವಾಗಿತ್ತು. ಅಲ್ಲಿಂದ ರಥ ಪಣಜಿಯ ಹೆಗಡೆವಾರು ಶಾಲೆಗೆ ತಲುಪಿತು

ನವೆಂಬರ್ ಒಂದನೇ ತಾರೀಖು ಬೆಳಗ್ಗೆ ಹೆಗಡೆವಾರು ಶಾಲೆಯಲ್ಲಿ ಪುಟ್ಟ ಮಕ್ಕಳ ಆವರಣದಲ್ಲಿ ವೀಕ್ಷಣೆಯಾದ ನಂತರ ಪಣಜಿಯ ಕಲಾ ಅಕಾಡೆಮಿಯಲ್ಲಿ ರಥ ಸ್ಥಾಪಿತವಾಯಿತು. ಅಲ್ಲಿಂದ ಸಂಜೆ ಅತ್ಯಂತ ಅಚ್ಚುಕಟ್ಟಾಗಿ ಸುಂದರವಾಗಿ ಆರತಿ ಹಾಗೂ ಪೂಜೆಯ ಮೂಲಕ ಗೋವೆಯ ಪರಂಪರೆ ದಿಂಡಿಯೊಂದಿಗೆ ಶೋಭಾಯಾತ್ರೆ ಆರಂಭವಾಯಿತು . ಸಮುದ್ರಕ್ಕೆ ತೀರ ಹತ್ತಿರವಿದ್ದ ಜಾಗ ಅಲೆಗಳ ಸದ್ದು ಒಂದೆಡೆಯಾದರೆ ಸಮುದ್ರದಲ್ಲಿ ಮರೆಯಾಗುತ್ತಿರುವ ಸೂರ್ಯ ಇನ್ನೊಂದೆಡೆಗೆ ಬಾನೆಲ್ಲ ಕೇಸರಿಮಯವಾಗಿ ರಥಯಾತ್ರೆ ರಂಗೇರಿತ್ತು. ಹಾಗೂ ಇದು ರಥ ಯಾತ್ರೆಯ ಕೊನೆಯ ಕಾರ್ಯಕ್ರಮ , ಪಣಜಿಯ ಮುಖ್ಯ ರಸ್ತೆಯುದ್ದಕ್ಕೂ ಸಾಗಿ ಮಹಾಲಕ್ಶ್ಮಿ ದೇವಸ್ಥಾನದ ಆವರಣದಲ್ಲಿ ಮುಕ್ತಾಯವಾಗಿತ್ತು ರಥದ ಕೊನೆಯ ಕಾರ್ಯಕ್ರಮದಲ್ಲಿ  ಮನೋಹರ್ ಮಾತನಾಡಿ ರಥದ ಬಗ್ಗೆ ಹಾಗೂ ನಿವೇದಿತಾಳ ಬಗ್ಗೆ ಮಾತನಾಡಿದರು . ರಥ ತನ್ನ ಚಿತ್ತಾರದಿಂದ ಅಲ್ಲಿದ್ದ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತ ರಥದ ಹತ್ತಿರ ಬಂದು ರಥದ ವಿವರಣೆ ಪಡೆಯುತ್ತಿದ್ದರು ಅಂತೂ ಒಂದು ವೈಭವದ ಶೋಭಾಯಾತ್ರೆಯಿಂದ ಗೋವೆಯಲ್ಲಿ ರಥಯಾತ್ರೆ ಮುಕ್ತಾಯವಾಗಿತ್ತು .

ಇಲ್ಲಿನ ಎಲ್ಲ ಸಂಘಟನೆಗಳನ್ನ ಒಟ್ಟುಗೂಡಿಸುವಲ್ಲಿ , ಶ್ರೀಮತಿ ಜಯಶ್ರೀ ಹೊಸಮನಿ ಹಾಗೂ ಶ್ರೀ ಸ್ಮಿತಾ ಬಗಲಿ ಯವರ ಪಾತ್ರ ದೊಡ್ಡದ್ದು.ಇನ್ನು ತನ್ನದೇ ಊರೆಂಬತೆ ಕಾರ್ಯಕ್ರಮದೂದ್ದಕ್ಕೂ ಜವಾಬ್ದಾರಿ ಹೊತ್ತು ಕೆಲಸ ಮಾಡಿದ Ravish Bhat , ಭಾರತೀಪುತ್ರ ಗೋಪಾಲ ಹಾಗೂ Shrinidhi Chippalkatti ನನ್ನ ಜೊತೆ ಹಠ ಹಿಡಿದು ನಾನು ಕಾರ್ಯಕ್ರಮಕ್ಕಲ್ಲ ಕೆಲಸಕ್ಕೆ ಬರ್ತಿನಿ ಎಂದು ಎಂದು ಮೂರು ದಿನಗಳ ಕಾಲ ಇಲ್ಲಿಯೇ ಇದ್ದು ಸಂಪೂರ್ಣ ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ ನಡೆಯುಸುವಲ್ಲಿ ಇವರ ಶ್ರಮ ತುಂಬಾ ದೊಡ್ಡದ್ದು . ಇಂತಹ ನಿಸ್ವಾರ್ಥ ಕಾರ್ಯಕರ್ತರ ಶ್ರಮವೇ ಯುವಾ ಬ್ರಿಗೇಡಿನ ಮೆಟ್ಟಿಲುಗಳು. ಈ ಕಾರ್ಯಕ್ರಮದ ತಯಾರಿಯಲ್ಲಿ ನಡೆದ ತಮಾಷೆಗಳು , ಹಾಸ್ಯದ ಚಟಾಕೆಗಳು , ಒಬ್ಬರಿಗೊಬ್ಬರು ಗೊತ್ತಿಲ್ಲದೆ ತೆಗೆದಿಟ್ಟುಕೊಂಡ ಫೋಟೋಗಳು ಇವೆಲ್ಲ ಅನುಭವಿಸದವನೆ ಬಲ್ಲ. ಅಂತೂ ಗೋವೆಯಲ್ಲಿ ನಡೆದ ರಥಯಾತ್ರೆ  ಕೊನೆಯವರೆಗೂ ಮರೆಯಲಾಗದ ಅವಿಸ್ಮರಣೀಯ ನೆನಪು.

Sunday, May 27, 2018

ಅಂತೂ ಗುರುವಿನ ಪದತಲಗಲ್ಲಿ ನಡೆಯುವ ಈ ಬದುಕು ಜೀವ ಗುರುವಿಗೆ ಸಮರ್ಪಣೆ.

ಗೊತ್ತು ಗುರಿಯಿಲ್ಲದ ಸಾಗಿದ ಬದುಕಿಗೆ ಒಂದರ್ಥ ಹುಟ್ಟಿದ ದಿನ ಇಂದೂ. ರಾಮಕ್ರಷ್ಣ ಮಠದ ಪೂಜ್ಯರಾದ ಶ್ರೀ ಗೌತಮಾನಂದ ಜೀ ಮಹಾರಾಜರಿಂದ ದೀಕ್ಷೆಯನ್ನು ಪಡೆದು ಇಂದಿಗೆ ಸರಿಯಾಗಿ ಒಂದು ವರ್ಷ. ಪ್ರತಿ ಜೀವಿಯ ಹುಟ್ಟು-ಸಾವುಗಳಲ್ಲಿಯೂ ಒಂದರ್ಥ ಇರುತ್ತೆ .  ತನ್ನ ತಪೋಶಕ್ತಿಯಿಂದ ,ಶಿಕ್ಷಣದಿಂದ ಬದುಕಿನ ಈ ಕಗ್ಗಂಟಿನಿಂದ ಪಾರು ಮಾಡಿಸಿ ಒಂದು ಅಂತ್ಯವನ್ನ ಹಾಡುವ ಹಾದಿಗೆ ತಲುಪಿಸುವವನೆ ಗುರು. ಈ ಗುರುವಿನ ಪಾದಡದಿಯಲ್ಲಿ ಕೂತು ಆತ ಕೊಟ್ಟಿದ್ದನ್ನೆಲ್ಲ ಅರಗಿಸಿಕೊಳ್ಳುತ್ತ ಹೋದಾಗಲೆ ಈ ಜನ್ಮದ ಬದುಕಿಗೊಂದು ಅರ್ಥ .ಈ ಬದುಕಿಗೆ ಇಂತಹ ಗುರುವಿನ ಅಭಯ ಹಸ್ತ , ಆಸರೆ ಸಿಕ್ಕು  ಇಂದಿಗೆ ಸರಿಯಾಗಿ ಒಂದು ವರ್ಷ.  ಅದ್ಯಾಗೋ ಕಲ್ಕತ್ತೆಯ ಬೆಲೂರು ಮಠದಲ್ಲಿ ಈ ಮಂತ್ರದೀಕ್ಷೆ ನಡೆಯಬೇಕಿತ್ತು. ಅದ್ಯಾವ ಕಾರಣಕ್ಕೆ ಅಲ್ಲಿ ತಪ್ಪಿತೋ ಇಂದಿಗೂ ಗೊತ್ತಿಲ್ಲ. ಸಿಗುವ ಗುರು , ದೀಕ್ಷೆಯ ಸ್ಥಳ , ಸಮಯ ಎಲ್ಲವು ಆ ಭಗವಂತನ ಪೂರ್ವ ನಿರ್ಧರಿತ ಎಂಬಂತೆಯೇ ಗೋವೆಯೇ ರಾಮಕ್ರಷ್ಣ ಮಠದಲ್ಲಿ ನನ್ನ ಮಂತ್ರ ದೀಕ್ಷೆ  ನಡೆಯಿತು. ಗೋವೆಯಲ್ಲಿ ರಾಮಕ್ರಷ್ಣ ಮಠ ಆರಂಭವಾಗಿದ್ದು ತೀರ ಇತ್ತೀಚಿನ ಎರಡೂವರೆ ವರ್ಷದ ಈಚೆಗೆ. ಅದಕ್ಕಿಂತ ಮೊದ್ಲು ರಾಮಕೃಷ್ಣ ಆಶ್ರಮವನ್ನ ಹುಡಕಾಡುತ್ತ ಗೋವೆಯ ಪೂರ್ತಿ ಸುತ್ತಿದ್ದು ಇನ್ನೂ ನೆನಪಿದೆ. ಆದ್ರೆ ನೋಡನೋಡತ್ತಲೇ ಮೊನ್ನೆ ರಾಮಕ್ರಷ್ಣ ಮಠದ ಹೊಸ ಕಟ್ಟಡದ ಉದ್ಘಾಟನೆಯು ಆಯಿತು. ಅದ್ಯಾವ ಪರಿ ವೇಗದಲ್ಲಿ ಇವೆಲ್ಲ ನಡೆಯಿತು ಎಂದರೆ ಇಂದಿಗೂ ನಂಬಲು ಅಸಾಧ್ಯ ನನಗೆ. ಅಂತೂ ಅಂತರಂಗದ ಈ ಯುದ್ಧ ತುಸು ಹಿಂದೆಯೇ ನಡೆದಿತ್ತಾದರೂ ಅದಕ್ಕೆ ಬಲ ಬಂದಿದ್ದು ಗುರುವಿನ ಆಗಮನದ ನಂತರವೇ. once again ಈ ದಾರಿಯ ಉದ್ದಕ್ಕೂ ಕೈ ಹಿಡಿದು ನಡೆಸಿದ್ದು ಚಕ್ರವರ್ತಿ ಅಣ್ಣನೆ. ಆ ದಿನ ಇನ್ನೂ ನೆನಪಿದೆ ಗೋವೆಯಲ್ಲಿ ರಾಮಕ್ರಷ್ಣ ಮಠದ ಆರಂಭವಾಗುತ್ತಿದೆ ಆದಷ್ಟು ಬೇಗ ಎಲ್ಲ ಕಾರ್ಯಗಳು ಶುರುವಾಗತ್ತೆ ಎಂಬ ಸುದ್ದಿಯನ್ನ ಕರೆಯ ಮೂಲಕ ತಿಳಿಸಿದ ಚಕ್ರವರ್ತಿ ಅಣ್ಣಾ, ಆ ದಿನದ ಆದ ಸಂತಸಕ್ಕೆ ಮಿತಿಯೇ ಇರಲಿಲ್ಲ . ಅಂತೂ ಗುರುವಿನ ಪದತಲಗಲ್ಲಿ ನಡೆಯುವ ಈ ಬದುಕು ಜೀವ ಗುರುವಿಗೆ ಸಮರ್ಪಣೆ.

Sunday, January 7, 2018

ಮಾಸ್ತರ್ ಕಲಿಸಿದ ಪಾಠ

ಈಗೊಂದು ಮುರ್ನಾಲ್ಕು ವರ್ಷಗಳ ಹಿಂದಿನ ಮಾತು , ಆಗಿನ್ನೂ ಯುವಾ ಬ್ರಿಗೇಡ್ ಹುಟ್ಟಿರಿಲಿಲ್ಲ. ಚಕ್ರವರ್ತಿ ಅಣ್ಣನ ಮಾತುಗಳಿಂದ ಪ್ರೇರಿತರಾಗಿ ಕಾರ್ಗಿಲ್ ವಿಜಯೋತ್ಸವವನ್ನ ಆಚರಿಸಬೇಕೆಂದು ನಿರ್ಧರಸಿ , ಹೇಗೆ ಏನೂ ಎತ್ತ ಯಾವದನ್ನೂ ಸಹ ತಿಳಿಯದೆ ಒಂದಿಷ್ಟು ಪೂರ್ವ ತಯಾರಿಯಲ್ಲಿ ಇದ್ದಾಗಲೇ ಸಿಕ್ಕಿದ್ದು ನಮ್ ಕಿರಣ್ ಅಣ್ಣಾ. ಅಲ್ಲಿಂದ ಆದ ಅವರ ಪರಿಚಯ ಇಂದಿಗೂ ಸಾಗುತ್ತ ಬಂದಿದೆ. ಅಲ್ಲಿಂದ ಹಿಡಿದು ಇಲ್ಲಿಯ ವರೆಗೂ ಪ್ರತಿ ಹೆಜ್ಜೆಯಲ್ಲೂ ಸಹ ಮಾರ್ಗದರ್ಶನ ನೀಡುತ್ತಾ ಕೈಹಿಡಿದು ನಡೆಸಿಕೊಂಡು ಬಂದಿದ್ದಾರೆ. ಹೃದಯದಲ್ಲಿ ಒಂದಿಷ್ಟು ರಾಷ್ಟ್ರ ಪ್ರೇಮ , ಸಮಾಜಕ್ಕಾಗಿ ಏನಾದರೂ ಮಾಡುವ ಹಪ ಹಪಿ ಹೊತ್ತು ತಿರುಗಾಡುತ್ತಿರುವಾಗಲೆ ಸರಿಯಾದ ಮಾರ್ಗದರ್ಶನ ಕೊಟ್ಟು ನನ್ನ ಸಾಗಿಸಿದ ಕೀರ್ತಿ ನಮ್ ಮಾಸ್ತರದ್ದು..ಮಾಸ್ತರ್ ಸರಿಯಾದ ಸಮಯಕ್ಕೆ ಸಿಗದೆ ಇದ್ದಿದ್ದರೆ ಬಹುಶ ಇಂದಿಗೆ ನಾನು ಅದೆಲ್ಲಿ ಇರುತ್ತಿದ್ದೇನೋ ಭಗವಂತನೇ ಬಲ್ಲ.. ನನ್ನ ಬದಕು ಬದಲಾದದ್ದೇ ಚಕ್ರವರ್ತಿ ಅಣ್ಣನ ಜೊತೆ ಮಾಡಿದ ಮೊದಲನೇ ಕನ್ಯಾಕುಮಾರಿಯ ಪ್ರವಾಸ, ಆಗಲೂ ಸಹ ನನ್ನ ತಯಾರು ಮಾಡಿ ಮನೇಲಿ ಖುದ್ದು ಮಾತನಾಡಿ ನನ್ನನ್ನು ಕಳಿಸಿ ಕೊಟ್ಟರು. ನೀವು ಬರಲ್ಲವ ಎಂದಾಗ ಇಲ್ಲದ ಕಾರಣ ನೆಪ ಹೇಳಿ ತಾವು ಅಲ್ಲೇ ಉಳಿದು ಬಿಟ್ಟರು. ಕನ್ಯಾಕುಮಾರಿ ಪ್ರವಾಸದಿಂದ ಮರಳುತ್ತಲೇ ಬದುಕಿನ ಹಾದಿಯು ಬದಲಾಗಿತ್ತು. ಅಲ್ಲಿಂದಾದ ನಿತ್ಯಣ್ಣನ ಪರಿಚಯ ಕೆಲಸದ ವೇಗ ಮತ್ತು ಜವಾಬ್ದಾರಿಯನ್ನು ಸಹ ಹೆಚ್ಚಿಸಿತ್ತು.  ಮೊದಲಿನಿಂದಲೂ ತುಂಬಾ ಜನ ಕೇಳ್ತಾರೆ ನೀನು ಅಷ್ಟೂ ದೂರ ಇದ್ದರು ಸಹ ಅದ್ ಹೇಗೆ ಎಲ್ಲವನ್ನು ನಿಭಾಯಿಸಿಕೊಂಡು ಹೋಗ್ತೀಯಾ ಅಂತ ಇದೆಲ್ಲ ನಮ್ ಮಾಸ್ಟರ್ ಕಲಿಸಿದ ಪಾಠ , ಸಿಕ್ಕ ಹೊಸತರಲ್ಲೇ ನನ್ನ ರಾಜ್ಯ ಮಟ್ಟದ ಕೆಲಸಗಳಲ್ಲಿ ಜವಾಬ್ದಾರಿಯನ್ನು ಹೊದಿಸಿ ತಪ್ಪಿದಾಗ ತಿದ್ದಿ ತೀಡಿ ಸದಾ ಪ್ರೋತ್ಸಾಹಿಸುತ್ತ ಬೆನ್ನಹಿಂದೆ ನಿಂತರು. ಅವರು ಕೆಲ್ಸ ಮಾಡುವ ಶೈಲಿ ,ಯೋಚನೆ ಎಲ್ಲವೂ ವಿಭಿನ್ನವೇ.ಹೇಳುವದಿನ್ನು ತುಂಬಾ ಇದೆ ಆದ್ರೆ ಸಾಕು ನಿಮ್ಮ ಮಾತು ನೆನಪಾಗತ್ತೇ ಮತ್ತೆ. " ಒದಕಿ ಹೆಂಗ್ ಬೀಳ್ತಾವ್ "  ಮುಂದೆಯೂ ಸಹ ಹೀಗೆ ನಗುತ್ತ ಆರೋಗ್ಯವಾಗಿ ಇರಿ ಮಾಸ್ತರ್. ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು. ಇಂದಿನ ತಮಾಷೆಗಳಿಗೆ ಎಲ್ಲ ಕ್ಷಮೆ ಇರಲಿ ಮಾಸ್ತರ್