ನಾನು ಈ ಉಪ್ಪಿನೋರಿಗೆ (ಗೋವೆಗೆ) ಬಂದು ಇವತ್ತಿಗೆ ಸರಿಯಾಗಿ 5 ವರ್ಷವಾಯಿತು(oct-16 2014) ,ಹಾಗೆ ನಾನು ಮಾಡುತ್ತಿರುವ ಇ ಕೆಲಸಕ್ಕು. ಜಿವನವನ್ನರಿಸಿ ನಾನು ಮುಂಡಗೊಡನ್ನು ಬಿಟ್ಟು 7 ವರ್ಷಗಳೇ ಕಳೆದವು ನಂತರದ ಈ ಜೀವನದಲ್ಲಿ ಪ್ರತಿಯೊಂದು ಬದಲಾಗುತ್ತ ಹೋಯಿತು .ನನ್ನ ಗೆಳೆಯರನ್ನು ಮಾತ್ರ ಬಿಟ್ಟು .ನನ್ನ ಜೀವನದ ಪ್ರತಿಯೊಂದು ಸಮಯದಲ್ಲು ನನ್ನ ಕೈ ಹಿಡಿದು ನಡೆದ ನನ್ನ ಗೆಳೆಯರಿಗೊಂದು ಸಲಾಮ್ .ನಾನು ಮುಂಡಗೊಡನ್ನು ಅದ್ಯಾವ್ ಪರಿ ಮಿಸ್ ಮಾಡಿಕೊಳ್ತೇನೆ ಅಂದ್ರೆ ನಮ್ಮೂರಿನ ಆ ನೆಲಕ್ಕೆ ಒಮ್ಮೆ ಮುತ್ತಿಟ್ಟು ಚುಂಬಿಸುವ ಆಸೆ ಆಗ್ಬಿಡುತ್ತೆ .ನನಗೆ ಎಲ್ಲರು ಹೇಳ್ತಾರೆ ನೀನು ಮುಂಡಗೊಡನ್ನು ಬಿಟ್ಟು ಹೋಗಿ ಒಳ್ಳೆಯ ಕೆಲಸ ಮಾಡಿದೆ ಅಲ್ಲೇ ಇರು ಆರಾಮಾಗಿ ಇರ್ತಿಯ ಅಂತ . ಆದ್ರೆ ಕಳೆದ 7 ವರ್ಷಗಳಿಂದ ನಾನು ಏನನ್ನು ಕಳಕೊಂಡಿದೇನೆ ನನಗೆ ಮಾತ್ರ ಗೊತ್ತು .ನನ್ನ ಊರಿನ ನೆನಪುಗಳು ಮಾತ್ರ ನನ್ನೆದೆಯಲಿ ಹಾಗೆ ಅಚ್ಹಾಗಿಯೇ ಉಳಿದಿವೆ . ಶತಮಾನಗಳೇ ಕಳೆದರು ಬದಲಾಗದೆ ನಿಂತಿರುವ ಆ ಬಸ್ ಸ್ಟಾಂಡ್ ,ನನ್ನ ಮನೆಯ ಮುಂದಿರುವ ದೇವಸ್ಥಾನ ಮತ್ತು ನನ್ನ 7 ನಂಬರಿನ ಡೊಳ್ಳು ,ಹೋಳಿ ಹಬ್ಬದ ಹಲಗೆ ಹೊಡೆತ ಕೊನೆಗೆ ಅಲ್ಲಿನ ಕನ್ನಡ ಭಾಷೆಯು ಕೊಡ ತುಂಬಾ ನೆನಪಾಗಿ ಕಾಡುತ್ತಿವೆ. ಜೀವನದಲ್ಲಿ ಏನ್ ಸಿಗದೇ ಇದ್ರೂ ಚಿಂತೆ ಇಲ್ಲ ಆದ್ರೆ ಬದಕು ಮಾತ್ರ ಮುಂಡಗೊಡ ನಲ್ಲೆ ಕಳೀಬೇಕು ಅನ್ನೋ ಆಸೆ ಆಗ್ತಾ ಇದೆ .