Total Pageviews

Friday, September 4, 2020

ನೆಮ್ಮದಿಯ ನಿಟ್ಟುಸಿರು

ದೂರ ಇರಬೇಕೆನ್ನುವಷ್ಟು ಬಂದು ಸುತ್ತಿಕೊಳ್ಳುತ್ತೇ ಈ ರಾಜಕೀಯದ ಬಳ್ಳಿ. ಅದೇಕೋ ಏನೂ ಈ ರಾಜಕೀಯ , ರಾಜಕೀಯ ಪಕ್ಷ ಮತ್ತು ಅಲ್ಲಾಗುವ ಡೊಂಬರಾಟಗಳು ಇವ್ಯಾವವು ಕೂಡ ಮೊದಲಿನೊಂದಲು ಅದೇನೋ ಒಂದು ನಕಾರಾತ್ಮಕ ಭಾವವನ್ನು ನನ್ನಲ್ಲಿ ಸ್ರಷ್ಟಿಸಿ ಬಿಟ್ಟಿವೇ. ಇಂತದೆ ಇನ್ನೂ ಅನೇಕ ಕಾರಣಗಳಿಂದ ಇವೆಲ್ಲ ರಾಜಕೀಯದ ಆಟಗಳಿಂದ ದೊರವೇ ಉಳಿದು ಬಿಟ್ಟಿದ್ದೇನೆ.  ಆದರೆ ಎಲ್ಲ ಪಕ್ಷಗಳಲ್ಲಿಯೂ ನನ್ನ ಆತ್ಮೀಯರು ಇದ್ದೆ ಇದಾರೆ ಎಲ್ಲರೊಂದಿಗೂ ಒಳ್ಳೆಯ ಬಾಂದ್ಯವ್ಯವಿದೆ. ಅದೆಷ್ಟೇ ವೀರೋಧಗಳು ಇದ್ದರು ಅದು ಅವರ ರಾಜಕೀಯ ನಿಲುವುಗಳಲ್ಲಿಯೇ ಹೊರತು ಯಾವದೇ ವ್ಯಕ್ತಿಯ ಜೊತೆಗಿಲ್ಲ. ಆದರೆ ಈಗ ವಿಷಯ ಅದಲ್ಲ. ಒಬ್ಬ ವ್ಯಕ್ತಿ ಸಾಮಾಜಿಕವಾಗಿ ಬೆರೆಯುತ್ತಿದ್ದಾನೆ , ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾನೆ ಎಂದರೆ , ಆತ ರಾಜಕೀಯಕ್ಕಾಗಿ ಮಾಡುತ್ತಿದ್ದಾನೋ ಏನೋ..? ಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನ..? ಇವನು ಯಾವ ಪಕ್ಷದವನು ಎಂತೆಲ್ಲ, ಆ ವ್ಯಕ್ತಿಯ ಸುತ್ತ ಕಥೆಗಳು ಶುರುವಾಗತ್ತೆ, ಸಾಮಾಜಿಕ ಕಾರ್ಯವೆಂದರೆ ಬರಿ ರಾಜಕೀಯ ಧುರೀಣರು ಎನಿಸಿಕೊಂಡವರು ಹಾಗೂ ರಾಜಕೀಯ ವ್ಯಕ್ತಿಗಳೇ ಮಾಡುವದು ಎಂಬಂತಹ ಅಲಿಖಿತ ಚೌಕಟ್ಟೊಂದು ಸಮಾಜದಲ್ಲಿ ಬೆಳೆದು ನಿಂತಿದೆ. ಖಂಡಿತವಾಗಿಯೂ ಇದು ತಪ್ಪು ಕಲ್ಪನೆಯೇ ಸರಿ. 
ಈಗ ನನ್ನ ವಿಚಾರದಲ್ಲೂ ಸಹ ಆಗಿರುವಂತದ್ದು ಇದೆ., ಪ್ರತಿ ಬಾರಿ ಯಾವದಾದರು ಚುನಾವಣೆ ಬಂತೆಂದರೆ ಯಾಕಾರು ಬರುತ್ತಪ್ಪ ಎನ್ನಿಸುವಷ್ಟು ಹಿಂಸೆಯನಿಸಿ ಬಿಡುತ್ತೆ. ನೀನು ಈ ಪಕ್ಷವ ಆ ಪಕ್ಷವ ಎನ್ನುವದರಿಂದ ಹಿಡಿದು ಸಂಬಂಧವೇ ಇಲ್ಲದ ಕಡೆಯಲ್ಲಿ ಎಲ್ಲ ನನ್ನ ಹೆಸರು ತಳಕು ಹಾಕಿಕೊಂಡು ಬಿಡುತ್ತೆ. ಸತ್ಯವಾಗಿಯೂ ಹೇಳುತ್ತೇನೆ ಈ ರಾಜಕೀಯ ನನ್ನ ಉದ್ದೇಶವೇ ಅಲ್ಲ , ಅಕಸ್ಮಾತ್ ರಾಜಕೀಯವೇ ನನ್ನ ಉದ್ದೇಶವಾಗಿದ್ದರೆ ಇಷ್ಟೊತ್ತಿಗೆ ಯಾವದೇ ಪಕ್ಷದಲ್ಲಿಯೋ  ಅಥವಾ ಕಳೆದ ಚುನಾವಣೆಯಲ್ಲಿ ನೇರವಾಗಿಯೇ ಕಣದಲ್ಲಿ ಭಾಗವಹಿಸುರಿತ್ತಿದ್ದೆ. ಚಕ್ರವರ್ತಿ ಅಣ್ಣನ ಮೂಲಕ ಸೈನಿಕರು ಹಾಗೂ ಸ್ವಾತಂತ್ರ್ಯದ ಕಲಿಗಳ ವೀರಗಾಥೆಯನ್ನ ಕೇಳುತ್ತ ವಿವೇಕಾನಂದರ ಮಾರ್ಗದರ್ಶನದಲ್ಲಿ ಸಾಮಾಜಿಕವಾಗಿ ಬೆರೆತು ರಾಷ್ಟ್ರಿಯತೆಗಾಗಿ ಬದುಕು ಸವಿಸಬೇಕು ಎಂಬ ಆಲೋಚನೆಯನ್ನ ಇಟ್ಟುಕೊಂಡವನು ಅಷ್ಟೇ. ಇನ್ನು ನಮ್ಮನ್ನು ತೀರ ಹತ್ತಿರದಿಂದ ಬಲ್ಲವರಿಗೆ ಗೊತ್ತು ನಾವಿಟ್ಟುಕೊಂಡ ಗುರಿ ಏನೂ ಎಂಬಂತಹದು. ಜಗತ್ತಿನ ಯಾವ ಆಗೂ ಹೋಗುಗಳ ಬಗ್ಗೆ ತಲೆಯೇ ಕೆಡಿಸಿಕೊಳ್ಳದೆ ದೂರಉಳಿದ ಅಪರೂಪಕ್ಕೊಮ್ಮೆ ಸಿಗುವ ಮಿತ್ರರು ಏನಪ್ಪಾ ನಿನ್ ಬಿಡು ಈಗ ಫುಲ್ ರಾಜಕೀಯ (politicion) ಆಗಿ ಬಿಟ್ಟಿದ್ದಿಯ ಎಂದು ಹೇಳಿದಾಗ ಅವರಿಗೆ ಹೇಗೆ ಮನವರಿಕೆ ಮಾಡುವದು ಎಂದು ಅರಿವಾಗದೆ ನಕ್ಕು ಸುಮ್ಮನಾಗಿಬಿಡುತ್ತೇನೆ. ನನಗೂ ಸಹ ಎಲ್ಲರಂತೆ ಮನೆಯ ಜವಾಬ್ದಾರಿ ಇದೆ,ವಯಕ್ತಿಕ ತಾಕಲಾಟಗಳಿವೆ ,  ವೃತ್ತಿ ಜೀವನದ ಜವಾಬ್ದಾರಿ ಇದೆ , ನನ್ನೂರಿನಿಂದ ದೂರ ಉಳಿದು ಹತ್ತು ವರ್ಷಗಳಿಂದ ಅದೀಕವೇ ಆಯಿತು ಆದರೆ ಎಂದಿಗೂ ಸಹ ನನ್ನೂರಿನ ಈ ಆತ್ಮೀಯತೆ , ಭಾಂದ್ಯವ್ಯ ಅಥವಾ ದೂರಲ್ಲಿದ್ದಿನೇ ಎಂಬಂತಹ ಭಾವ ಎಂದಿಗೂ ಕಾಡಲೇ ಇಲ್ಲ. ಇದಕ್ಕೆಲ್ಲ ಕಾರಣವಾಗಿದ್ದು ನನ್ನ ಯುವಾ ಬ್ರಿಗೇಡ್. ವಿವೇಕಾನಂದರನ್ನ ನನ್ನೊಳಗೆ ಇಂಜೆಕ್ಟ್ ಮಾಡಿದ ಪರಿಣಾಮವೋ ಅಥವಾ ಚಕ್ರವರ್ತಿ ಅಣ್ಣನ ಮೂಲಕ ಒಳಗೆ ಇಳಿದ ರಾಷ್ಟ್ರೀಯತೆಯ ಭಾವವೋ..! ನನ್ನೂರಿನ ಕುರಿತಂತೆ ಅನೇಕ ಕನಸುಗಳನ್ನ ಕಟ್ಟಿಕೊಳ್ಳುವಂತೆ ಮಾಡಿಬಿಟ್ಟಿದೆ. ದೂರದ ಊರಿನಲ್ಲೇನೋ ಒಂದು ಒಳ್ಳೆಯ  ಉದ್ಯಾನವನ, ಬಸ್ ಸ್ಟಾಂಡ್ , ಒಂದೊಳ್ಳೆ ಕಾಲೇಜು, ಒಳ್ಳೆಯ ವ್ಯವಸ್ಥೆಯುಳ್ಳ ಆಸ್ಪತ್ರೆ ,ತರುಣರಿಗೆ ಒಂದಿಷ್ಟು ಕೆಲಸ,  ಕೊನೆಗೆ ಒಳ್ಳೆಯದೊಂದು ರಸ್ತೆ ಕಂಡಾಗಲು ಸಹ ಇದೂ ನಮ್ಮೂರಲ್ಲಿ ಇದ್ದರೆ ಎಷ್ಟು ಚೆಂದವಲ್ಲವ ಎಂದೆನಿಸುತ್ತದೆ. ಮಾತ್ ಆಡಿದರೆ ಸಾಕು ಅದು ಹಾಗೆ ಇದು ಹೀಗೆ ಅಂತ ಹತ್ತು ಹಲವು ಸಮಸ್ಯೆಗಳನ್ನೇ ಹೇಳುತ್ತಾರೆಯೇ ಹೊರತು ಅದಕ್ಕೆ ಪರಿಹಾರ ಏನೂ ..? ಏನೂ ಮಾಡಬಹುದು ಎಂಬ ಪ್ರಶೇ ಬಂದಾಗ ನಿಜಕ್ಕೂ ಅವರ ಹತ್ರ ಉತ್ತರವೇ ಇರಲ್ಲ. ಇನ್ನು ಇವಗಳನ್ನೆಲ್ಲ ಸರಿ ಮಾಡುವ ಒಟ್ಟು ಅವಕಾಶ ಕೈಯಲ್ಲಿ ಇದ್ದಾಗ ಒಂದಿಷ್ಟು ನೋಟುಗಳಿಗೆ ಬಲಿಯಾಗಿ ಮತಗಳನ್ನು ಮಾರಿಕೊಂಡು ಮತ್ತೈದು ವರ್ಷ ಸಮಸ್ಯೆಗಳ ಸರಮಾಲೆಯಲ್ಲಿ ಇನ್ನೊಂದಿಷ್ಟು ಸಮಸ್ಯೆಗಳನ್ನ ಪೋಣಿಸುತ್ತ ಕೂತು ಬಿಡುತ್ತಾರೆ. ಮೊನ್ನೆ ನಡೆದ ಪಟ್ಟಣ ಚುನಾವಣೆಯಂತೂ ನಿಜಕ್ಕೂ ತುಂಬಾ ಬೇಸರ ತಂದು ಬಿಟ್ಟಿದೆ. ಯಾವ ಚುನಾವಣಾ ಅಭ್ಯರ್ಥಿಯು ಅಥವಾ ನಾಯಕನು ಬ್ರಷ್ಟನಾಗಿರುವದಿಲ್ಲ ಅಥವಾ ಕೆಟ್ಟವನಾಗಿರುವದಿಲ್ಲ  , ಆತ ಹೇಗೆ ಇದ್ದರೂ ಸಹ ಅದು ಮತದಾರರ ಸ್ರಷ್ಟಿ ಅಷ್ಟೇ. ಒಂದಂತೂ ಸತ್ಯ ಅರಿವಿಗೆ ಬಂದಾಗಿದೆ ಎಲ್ಲಿಯವರೆಗೆ ನೋಟಿನ ಮೇಲೆ ಓಟಿನ ಆಟ ನಡೆಯತ್ತೋ ಅಲ್ಲಿಯ ವರೆಗೆ ಮುಂಡಗೋಡ ಸುಧಾರಿಸುವದಿಲ್ಲ ಬರೆದಿಟ್ಟುಕೊಂಡು ಬಿಡಿ ಇದನ್ನ. ಅದು ಆದರೂ ಸಹ ಅಮೆ ಗತಿಯದ್ದೇ . ಉದಾಹರಣೆಗೆ ಈ ವರ್ಷ ಏನಾದ್ರೂ ಮುಂಡಗೋಡಿಗೆ ಬಸ್ ಸ್ಟಾಂಡ್ ನಿರ್ಮಾಣವಾದರೆ ಅದಕ್ಕೆ ಏನೇನ್ನುವಿರಿ..? 
ನನ್ನವರಿಗೆ ಅದ್ಯಾಕೆ ಇವೆಲ್ಲ ಬೇಕು ಅಂತ ಅನಿಸುವದಿಲ್ಲವೋ , ಅರ್ಥವಾಗುವದಿಲ್ಲವೋ  ಭಗವಂತನೇ ಬಲ್ಲ. ಅಥವಾ ಈ ಊರೇ ಇಷ್ಟು ಎಂದು ನಿರ್ಧರಿಸಿ ಬಿಟ್ಟಂತೆ ಇದೆ. ಹೇಳುತ್ತಾ ಹೋದರೆ ಇದು ಮುಗಿಯದೆ ಹೊದಿತು ಸಾಕು. ಇನ್ನೇನು ಲೋಕಸಭೆ ಚುನಾವಣೆ ಮತ್ತೆ ಬರುತ್ತಿದೆ ರಾಜಕೀಯ ಹೌದೋ ಅಲ್ಲವೋ ಆದರೆ ಈ ಬಾರಿ ಮತ್ತೆ ಮೋದಿಯನ್ನ ಬಲಿಷ್ಠಪಡಿಸಬೇಕಿದೆ , ದೇಶಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಿರುವ ಸೇವಕನಿಗೆ ಮತ್ತೊಮ್ಮೆ ಅವಕಾಶ ನೀಡಬೇಕಿದೆ. ಮೋದಿಯ ಕುರಿತು ಮಾತನಾಡುತ್ತೇನೆಂದೆರೆ ನಾನು ಭಾಜಪಾ ಆಗಿಬಿಟ್ನ..? 😉😛😆(2018 ರಲ್ಲಿ ಬರೆದದ್ದು)