Total Pageviews

Monday, July 6, 2015

ಭದ್ರಗಿರಿಯ ಹಳಿಂಗಳಿ ಮತ್ತು ನೆನಪಿನ ಇನ್ನೊಂದು ಮೈಲಿಗಲ್ಲು


    4ನೇ ತಾರಿಖು ಶನಿವಾರ ಸಂಜೆ ಹುತಾತ್ಮ ಭರತೆಶನಿಗೆ ಶ್ರದ್ದಾಂಜಲಿ ಸಭೆ , 5 ನೇ ತಾರಿಖು ಹಳಿಂಗಳಿಯಲ್ಲಿ 25000 ಸಸಿಗಳನ್ನು ನೆಡುವ ಸಾಹಸದ  ಕಾರ್ಯಕ್ರಮ , ಹೊರಡುವದೋ  ಬೇಡವು ಎಂಬ ಗೊಂದಲದಲ್ಲೆ ಹೊರಟದ್ದಾಯಿತು , ಶನಿವಾರ ಬೆಳಗ್ಗೆ ಹೊರಟು  ಅಥಣಿ ತಲಪುವದಕ್ಕೆ ಸಂಜೆ 5:30 ದೀರ್ಘ ಪ್ರಯಾಣ ಸ್ವಲ್ಪ ಆಯಾಸ , ಭರತೇಶನ ಶ್ರದ್ದಾಂಜಲಿ ಸಭೆಯಲ್ಲಿ ನೆರೆದಿದ್ದ ಅಪಾರ ಜನಸ್ತೋಮದ ಮನಗಳು ಭಾರವಾಗಿದ್ದವು , ಅಲ್ಲಿಂದ ರಾತ್ರಿ ಊಟ ಮುಗ್ಗಿಸಿ ಭದ್ರಗಿರಿಗೆ ತಳಪುವದರೊಳಗೆ ಸಮಯ ಅದಾಗಲೇ 11 . ಇನ್ನೇನು ಮಲಗಬೇಕು ಎನ್ನುವದರೊಳಗೆ ,ಕಿರಣ್ ಅಣ್ಣ - ಪವನ್ ನೀ ನಡಿ ನನ್ನ ಜೊತೆ ಅಂದ್ರು , ಆದೇಶ ಪಾಲಿಸುವದೊಂದೇ ನನ್ನ ಕೆಲಸ  ಹೂ ಎಂದು ಹೊರಟೆಹಳಿಂಗಳಿಯ ದೊಡ್ಡ ಬೆಟ್ಟಕ್ಕೆ ಹೊರಟು ಬೆಳಗಿನ ಎಲ್ಲ ತಯಾರಿ ನಡೆಸಿ , ತೋಡಿದ ಗುಂಡಿಯೇನ್ನಲ್ಲ ಒಮ್ಮೆ ನೋಡಿ ರಾತ್ರಿ ಮರಳಿ ಬರುವದೊರಳಗೆ ಸಮಯ ಘಂಟೆಯಾಗಿತ್ತು . ಅದ್ಯಾರದು ಮನೆ ಗೊತ್ತಿಲ್ಲ ಮನೆಯ ತಾರಿಸಿಯ ಮೇಲೆ ನೀರಾಶ್ರಿತರ ಶಿಬಿರದಲ್ಲಿರುವ ತರಾ ಸಾಲಾಗಿ ಎಲ್ಲರು ಮಲಗಿದ್ದರು , ಅಲ್ಲಿಯೇ ಯಾರದೋ ಚಾದರನ್ನು ಎಳೆದು ಸಿಕ್ಕ ಜಾಗದಲ್ಲಿ ಮಲಗಿದೆ  , ಬೆಳಗ್ಗೆ ಚಕ್ರವರ್ತಿ ಅಣ್ಣನ ಧ್ವನಿಯನ್ನು ಕೇಳಿದಂತಾಗಿ ಮುಸುಕು ಕಣ್ಣಿನಲ್ಲಿ ನೋಡಿದರೆ ಬದಿಗೆ ವಿನಯ್ ಅಣ್ಣ ಮತ್ತೊಂದು ಬದಿಗೆ ಚಕ್ರವರ್ತಿ ಅಣ್ಣ , ಇಷ್ಟೆಲ್ಲಾ ಹೇಳಲು ಕಾರಣ ಯುವ ಬ್ರಿಗೆಡ್ ಸರಳತೆ ಮತ್ತು ನನ್ನ ನಿದ್ದೆ ಸರಿಯಾಗಿಲ್ಲ ಎಂದು.

  ಇನ್ನು ಭಧ್ರಗಿರಿಯ ಬೆಟ್ಟ , ನಾವೆಲ್ಲಾ ಉತ್ತರ ಕರ್ನಾಟಕದ ಕಡೆಗಿನ ಬೆಟ್ಟಗಳನ್ನು ನೋಡಿದ್ದಿವಿ ಬೋಳು ಬೆಟ್ಟಗಳು ದೊಡ್ಡ ಕಲ್ಲುಗಳು ಬಿಟ್ಟರೆ ಜಾಲಿ ಮುಳ್ಳುಗಳು , ಇಂತಹ ಬೆಟ್ಟದಲ್ಲಿ ನಾವು ಇವತ್ತು ಸಸಿಗಳನ್ನು ನೆಡಬೇಕು ,ಅದಕ್ಕಾಗಿ ಸುಮಾರು ೨೯೦೦೦ ಸಾವಿರ ಸಸಿಗಳು ಮತ್ತು - ಸಾವಿರ ಯುವಶಕ್ತಿಯಿಂದ ಹಿಡಿದು ೯೦ ಅಜ್ಜಿಯವರೆಗೆ ಎಲ್ಲರು ಸಿದ್ದ , ಬೆಳಗ್ಗೆ ಚಕ್ರವರ್ತಿ ಅಣ್ಣನ ಮಾತುಗಳಿಂದ ಪ್ರೇರಣೆ ಪಡೆದು ನಮ್ಮ ಯುವ ಬ್ರಿಗೇಡಿಯರ್ ಗಳು ತಮ್ಮ ತಮ್ಮ ಬೆಟಾಲಿಯನ್ (ಗುಂಪಿನೊಂದಿಗೆ) ಮೊದಲೇ ನಿರ್ಧರಿಸಿದಂತೆ ಬೆಟ್ಟದ ಮೂಲೇ ಮೂಲೆಯ ಕಡೆಗೂ ಹೊರಟರು .

ಸಸಿನೆಡುವ ಕಾರ್ಯ - ನಮ್ಮ ಗುಂಪಿನಲ್ಲಿ ನಾವುಂದು ೫೦ ಜನ ಸಸಿಯನ್ನು ನೆಡಬೇಕು ಅಷ್ಟೊಂದು ಸುಲಭದ ಕೆಲಸವಲ್ಲ ಇಳಿಜಾರಿನ ಬೆಟ್ಟ ನಡೆದಾಡಲು ಜಾಗವಿಲ್ಲ ಮಧ್ಯ ಮಧ್ಯ ಕಲ್ಲುಗಳು , ನಮ್ಮ ಸ್ವಾಗತಕ್ಕೆ ಕಾದು ಕುಳಿತ ಜಾಲಿ ಮುಳ್ಳುಗಳು , ಮೊದಲು ಮೇಲಿಂದ ಎಲ್ಲ ಸಸಿಗಳುನ್ನು ಕೆಳಗಡೆ ಸಾಗಿಸಬೇಕು ಸುಮಾರು ಒಂದು ಸಾವಿರ ಸಸಿಗಳು ಅಲ್ಲಿಂದ ಗುಂಡಿ ತೊಡಿದಂತಹ ಜಾಗಕ್ಕೆ ಸಾಗಿಸಬೇಕು , ಮಧ್ಯ ಯಾರೋ ಎಲ್ಲಿಂದಲೋ ಭಾರತ್ ಮಾತಾ ಕೀ ಎನ್ನುವದು ಎಲ್ಲರು ಒಟ್ಟಿಗೆ ಜೈ ಅನ್ನುವದು ಇದರ ಜೊತೆಗೆ ಬುಲೆಟ್ ನಲ್ಲಿ ಪೂರ್ತಿ ಬೆಟ್ಟವನ್ನು ತಿರುಗುತ್ತ ಸ್ಪೂರ್ತಿಯನ್ನು ತುಂಬುವ ನಮ್ಮ ಬ್ರಿಗೇಡಿಯರ್ ಚಕ್ರವರ್ತಿ , ಕೆಲಸಕ್ಕೆ ಸ್ಫೂರ್ತಿ ಮತ್ತು ಕೆಲಸದ ವೇಗ ಹೆಚ್ಚುತ್ತಿತ್ತು , ಈಗ ಸೂರ್ಯ ಸ್ವಲ್ಪ ಮೇಲೆ ಬಂದಾಗಿತ್ತು ಗುಂಪಿನಲ್ಲಿರುವರ ಸಂಖ್ಯೆಯು ಕಡಿಮೆ ಯಾಗಿತ್ತು ಇನ್ನು ಉತ್ತರ ಕರ್ನಾಟಕದ ಬಿಸಿಲಿನ ಬಗ್ಗೆ ಬೇರೆ ಹೇಳಬೇಕ ..?




ಮೊದಲನೇ ಹಂತದ ಕೆಲಸವಾಗಿತ್ತು ಸಸಿಗಳನ್ನ ಭೂಮಿಯೊಳಗೆ ಹಾಕಿಯಾಗಿತ್ತು ಅದಕ್ಕಿಗ ನೀರು ಹಾಕುವ ಕೇಲಸ ಅತ್ಯಂತ ಕಟಿಣವಾದದ್ದು , ಇವಗಳೆಲ್ಲ ನಡುವೆ ನನಗೆ ಸ್ಪೂರ್ತಿಯಾದದ್ದು ತಾಯಿಯೊಬ್ಬರು ಬೆಟ್ಟದ ಭಾಗದಿಂದ ಪೂರ್ತಿಯಾಗಿ ತಿರುಗಿ ಸಸಿ ನೆಟ್ಟು ತೆಗೆದ ಪ್ಲಾಸ್ಟಿಕ್ ಚಿಲಗಳನ್ನು ಒಟ್ಟು ಮಾಡುತ್ತಿದ್ದದ್ದು ಮತ್ತು ಸ್ವತಹ ತಾವೇ ಸಸಿಗಗನ್ನು ಹೊತ್ತು ಹೋಗಿ ನೆಡುತ್ತಿದ್ದರು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು . ನನಗೆ ಸುಸ್ತಾಯಿತು ಆನಿಸಿದಾಗ ಒಮ್ಮೆ ತಾಯಿಯತ್ತ ನೋಡಿ ಮತ್ತೆ ಸ್ಪೂರ್ತಿಯಿಂದ ನನ್ನ ಕೆಲ್ಸಕ್ಕೆ ನಾನು ಅಣಿಯಾಗುತ್ತಿದ್ದೆ , ಇಂತಹ ತಾಯಂದಿರ  ಹಲವಾರು ಕಥೆಗಳನ್ನು ನನ್ನ ಮಿತ್ರರು ಕೊನೆಯಲ್ಲಿ ನನಗೆ ಹೇಳಿದರು . ಸುಮಾರು ೧೨೦೦ ಸಸಿಗಳನ್ನು ನೆಟ್ಟಾಗಿತ್ತು  ಈಗ ಅದಕ್ಕೆ ನೀರು ಹಾಕಬೇಕು , ಕುಡಿಯಲು ನೀರಿಲ್ಲ ನೀರನ್ನು ಕುಡಿಯಬೇಕಾದರು ಬೆಟ್ಟದ ತುದಿಗೆ ಹೋಗಬೇಕು . ತುಂಬಾ ಇಳಿಜಾರು ಮತ್ತು ಕಲ್ಲುಗಳಿರುವದರಿಂದ ನೀರಿನ ಟ್ಯಾಂಕರ್ ಅರ್ಧ ಕಿಲೋಮಿಟರ ದೂರದಲ್ಲಿಯೆ ನಿಂತಿತ್ತು . ಇದರ ಜೊತೆಗೆ ವಾಟ್ಸ್ ಪ್  ನಲ್ಲಿ ಪದೇ ಪದೇ ಬರುವ ಮೆಸೆಜುಗಳ ತರ ಜಾಲಿ ಮುಳ್ಳುಗಳು ಪ್ರತಿಯೊಬ್ಬರಿಗೂ ಕಾಡಿದ್ದು ಸುಳ್ಳಲ್ಲ , ನಮ್ಮ ಗಂಟಲುಗಳು ಆರಿಹೊಗಿವೆ ಸಸಿಗಳು ನೀರಿಲ್ಲದೆ ಭೂಮಿಯ ಒಡಲಲ್ಲಿ ನಿಂತಿವೆ , ಯಾರೋ ಒಂದು ಕೊಡ ನೀರನ್ನು ಮೆಲಿನಿಂದ ಹೊತ್ತು ತಂದರು  ಅದರಲ್ಲಿ ಎಲ್ಲರು ಸ್ವಲ್ಪ ನೀರನ್ನು ಕುಡಿದು ಜೊತೆಗೆ ಸುಮುಖ್ ಅಣ್ಣನ ಮಾತುಗಳಿಂದ ಪ್ರೇರಣೆ ಪಡೆದು  ಅರ್ಧ ಕಿಲೋಮಿಟರ ದೂರದವರೆಗೂ ಟ್ಯಾಂಕರ್ ನಿಂದ ಹೀಡಿದು ನಮ್ಮ  ಭಾಗದ ತುದಿಯ ವರೆಗೂ ಸಾಲಾಗಿ  ನಿಂತು , ನೀರು ತುಂಬಿದ ಕೊಡಗಳು ಕೈಯಿಂದ ಕೈ ಗೆ ಸಾಗಿ ಕೊನೆಯಲ್ಲಿ ಸಸಿಗಳನ್ನು ತಂಪಾಗಿಸುತ್ತಿದ್ದವು ಇವಗಳ ನಡುವೆ ಭಾರತ ಮಾತಾ ಕೀ ಜೈ , ವಂದೇ ಮಾತರಂ ಘೋಷಣೆಗಲಿಂದ ಕೆಲಸದ ವೇಗ ಹೆಚ್ಚುತ್ತಿತ್ತು , ಅದೇ ಸಮಯಕ್ಕೆ ಸರಿಯಾಗಿ ಸೂರ್ಯನಿಗೆ ಮೋಡ ಮರೆಯಾಗಿ ತಂಪು ಗಾಳಿ ಬಿಸಲು ಶುರುವಾಯಿತು . ಇತ್ತ ನಾವು ನೀರನ್ನು ಹಾಕುತ್ತಿದ್ದರೆ ನಮ್ಮ ಭಾಗದ ಬದಿಗೆ ಇನ್ನೊಂದಿಷ್ಟು ಜನ ಸಸಿ ಗಳನ್ನೂ ನೆಡಲು ಶುರು ಮಾಡಿದ್ದರು ಸುಮಾರು ೧೫೦೦ ಸಸಿಗಳನ್ನು ನೆಟ್ಟು ನೀರುಣಿಸಿಯಾಗಿತ್ತು , ಯುದ್ದವನ್ನೇ ಗೆದ್ದವೆಂಬ ಸಂಬ್ರಮ ಜೀವನದಲ್ಲಿ ಒಂದು ಅನುಭವ ಮತ್ತು ನೆನಪಿನ ಮತ್ತೊಂದು ಮೈಲಿಗಲ್ಲುಅದಾಗಲೇ ಹೊಟ್ಟೆ ಚುರುಗುಡುತ್ತಿತ್ತು , ಹಾ ಇಷ್ಟೆಲ್ಲಾ ನಡೆದಿದ್ದು ಬೆಟ್ಟದ ಒಂದು ಭಾಗದಲ್ಲಿ ಮಾತ್ರ , ಆದರೆ  ಇಂತಹ ಸಹಸಮಯವಾದ ಕೆಲಸ ಹಳಿಂಗಳಿ ಬೆಟ್ಟದ ಪೂರ್ತಿ  ಪ್ರತಿ ಭಾಗದಲ್ಲೂ ನಡೆದಿದೆ , ಇದುವೇ ನನ್ನ ಹೆಮ್ಮೆಯ ಯುವಾ ಬ್ರಿಗೆಡ್ . ಎಲ್ಲಿ ಮಳೆಯಗುತ್ತೋ ಬಿಡತ್ತೋ , ಆದ್ರೆ  ಹಳಿಂಗಳಿಯಲ್ಲಿ ಮಳೆ ಆಯ್ತಾ ..? ಅಂತ ಪ್ರತಿಯೊಬ್ಬ ಯುವಾ ಬ್ರಿಗೇಡಿಯರ್ ಕೇಳದೆ ಇರಲಾರ

ಮರಳಿ ಮನೆಗೆ ಬಂದ ಮೇಲೆ ಗೊತ್ತಾಯಿತು ಅವತ್ತು ರಾತ್ರಿ ಅಲ್ಲಿ ಮಳೆಯಾಯಿತು ಅಂತ , ಮುನಿಶ್ವರ ಸ್ವಾಮಿಗಳು 4 ದಿನಗಳಿಂದ ಮಳೆ ಬರುವದಕ್ಕಾಗಿ ನೀರನ್ನು ಸಹ ಕುಡಿಯದೆ   ಮಾಡುತ್ತಿದ ಉಪವಾಸದ ಹಠಯೋಗ ಫಲಕೊಟ್ಟಿತ್ತು.


ಪವನ್ ಹೆಬ್ಬಾರೆ