Total Pageviews

Monday, April 6, 2020

ಶಕ್ತಿಮಾನ್ ಗೆ ಶಕ್ತಿಗಳು ದೊರೆತಿದ್ದು ಎಲ್ಲಿಂದ..?

  ಭಾರತದಲ್ಲಿ ಶಕ್ತಿಮಾನ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.? 90ರ ದಶಕದ ಕೊನೆಯಲ್ಲಿ ಶುರುವಾದ ಈ ಧಾರಾವಾಹಿಯ ಸರಣಿಯು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಅಚ್ಚುಮೆಚ್ಚಿನದಾಗಿತ್ತು.ಶಕ್ತಿಮಾನ್ ಭಾರತದ ಮೊದಲ ಸೂಪರ್ ಹೀರೊ. ಈಗ ಕರೋನ ಕಾರಣದಿಂದ ಪೂರ್ತಿ ದೇಶವೇ ಲಾಕ್ ಡನ್ ಆದ ಹಿನ್ನೆಲೆಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಪ್ರಖ್ಯಾತ tv ಸರಣಿಗಳಾದ "ರಾಮಾಯಣ" "ಮಹಾಭಾರತದ" ಜೊತೆ ಸುಮಾರು 21ವರ್ಷಗಳ ಬಳಿಕ ಶಕ್ತಿಮಾನ್ ಕೂಡ ಪ್ರಸಾರವಾಗುತ್ತಿದೆ. ಶಕ್ತಿಮಾನ್ ನಂತರ ನಾವು ಸಾಕಷ್ಟು ಸೂಪರ್ ಹೀರೋಗಳನ್ನ ನೋಡಿದಿವಿ  ಐರನ್ ಮ್ಯಾನ್ ,ಸ್ಪೈಡರ್ ಮ್ಯಾನ್ , ಹಲ್ಕ್ , ಕ್ರಿಶ್ ,ರಾ-ವನ್ ಇತ್ತೀಚಿಗೆ ತೆರೆಕಂಡ ರಜನಿಕಾಂತನ ಚಿಟ್ಟಿ ಜೊತೆಗೆ ಅನೇಕ ಸೂಪರ್ ಹೀರೋಗಳು ಆಗಿಹೋದರು ಆದರೆ ಇವರೆಲ್ಲ ಸೂಪರ್ ಹೀರೋಗಳಾದ ಹಿನ್ನೆಲೆಯಲ್ಲಿ ಒಂದು ಕಥೆ ಇದೆ ಅಥವಾ ಇನ್ಯಾವದೋ ಒಂದು ಕಡೆಯಿಂದ ಇವರಿಗೆ  ಶಕ್ತಿ ಲಭಿಸಿರುತ್ತದೆ ಆದರೆ ಇವಗಳೆಲ್ಲ ಕೇವಲ ಕಪೋಕಲ್ಪಿತ ಕಥೆಗಳು ನಿಜ ಜೀವನದಲ್ಲಿ ಸಾಧ್ಯವಿಲ್ಲ ಎಂಬುದು ಸಿನೆಮಾ/ಪಾತ್ರದಿಂದ ಆಚೆ ಬರುತ್ತಲೇ ಅರಿವಾಗುತ್ತೆ.ಈಗ ವಿಷಯಕ್ಕೆ ಬರೋಣ ಶಕ್ತಿಮಾನ್ ಗೆ ಶಕ್ತಿಗಳು ಬಂದಿದ್ದು ಎಲ್ಲಿಂದ..? ಆತ ಹೇಗೆ ಗಳಿಸಿಕೊಂಡ ಈ ಶಕ್ತಿಗಳನ್ನ.? ಮತ್ತೆ ಮರುಪ್ರಸಾರವಾಗುತ್ತಲೇ  ಇಂತಹ ಪ್ರಶ್ನೆ ಮನಸಲ್ಲಿ ಮೂಡತೊಡಗಿದವು.ಇವುಗಳ ಉತ್ತರಕ್ಕೆ ಈ ಪುಟ್ಟ ಪರಿಶ್ರಮ.ಶಕ್ತಿಮಾನ್ ನ ಮೊದಲನೇ ಸಂಚಿಕೆ ನೋಡಿದವರಿಗೆ ಗೊತ್ತಿರುತ್ತೆ ಆದರೆ ಹೆಚ್ಚಿನವರು ಅದನ್ನ ನೋಡಿಯೇ ಇಲ್ಲ ಅಕಸ್ಮಾತ್ ನೋಡಿದ್ರು ಕೂಡ ನನ್ನಂಥವರಿಗೆ ಅರ್ಥವಾಗಿರಲಿಕ್ಕಿಲ್ಲ ಯಾಕಂದ್ರೆ ನನಗಾಗ ಎಂಟೋ ಓಬತ್ತೋ ವರ್ಷ😉 ,ಯಾಕೋ ಇಂದು ಈ ವಿಷಯದಲ್ಲಿ ತುಂಬಾ ಅಸಕ್ತನಾಗಿ ಉತ್ತರಗಳನ್ನ ಹುಡುಕಾಡುತ್ತ ಕೂತೆ.



ಶಕ್ತಿಮಾನ್ ಎಂದರೆ ಮೊದಲು ನೆನಪಾಗೋದು ಆತ ಗಿರಿ ಗಿರಿ ತಿರುಗುವದು ಜೊತೆಗೆ ತಲೆಯಲ್ಲಿ ಗುನುಗೂಡುವದೇ  ಅದರ ಶೀರ್ಷಿಕೆಯ ಹಾಡು ಶಕ್ತಿಮಾನ್ ಶಕ್ತಿಮಾನ್ ಶಕ್ತಿಮಾನ್ (ಹಾಡಿನ ದಾಟಿಯಲ್ಲೇ ಒಮ್ಮೆ ಓದಿಬಿಡಿ 😜)
ಈ ಹಾಡಿನ ದಾಟಿಯಿಂದ ಸ್ವಲ್ಪ ಒಳಗೆ ಇಳಿದು ಅದರ  ಸಾಹಿತ್ಯವನ್ನ ನೋಡುತ್ತಾ ಹೋದರೆ ಶಕ್ತಿಮಾನ್ ನ ರೂಪ ಅನಾವರಣ ಗೊಳ್ಳುವದರ ಜೊತೆಗೆ ನಿರ್ದೇಶಕ ಏನೂ ಹೇಳಲು ಹೊರಟಿದ್ದಾನೆ ಅನ್ನೋದು ಅರ್ಥವಾಗುತ್ತ ಹೋಗುತ್ತೆ. ಮೊದಲು ಆತ ಶಕ್ತಿ ಪಡೆದುಕೊಂದದ್ದು ಹೇಗೆ ಅಂತ ನೋಡೋಣ. 
ಅದು ಶಕ್ತಿಮಾನ್ ನ  ಮೊದಲ ಸಂಚಿಕೆ ,ಹಿನ್ನಲೆ ಧ್ವನಿಯಿಂದ ಶುರುವಾಗತ್ತೆ. ಅನಂತ ಬ್ರಹ್ಮಾಂಡ ಅಂತರಿಕ್ಷ ಮತ್ತು ಅದರ ಒಂದು ಸಣ್ಣ ಭಾಗ ಪ್ರಥ್ವಿ - ಹತ್ತು ಸಾವಿರ ವರ್ಷಗಳ ಹಿಂದೆ ನಿರ್ಮಲ ,ಸುಂದರ ಮತ್ತು ಈ ಪವಿತ್ರ ಪ್ರಥ್ವಿಯ ಮೇಲೆ ಸುರ್ಯಾಂಶು ಅಂದರೆ ಸೂರ್ಯ ವಂಶಿಗಳ ರಾಜ್ಯವಿತ್ತು.ಯೋಗಿ ಮತ್ತು ತಪಸ್ವಿಗಳಿಂದ ಈ ಪ್ರಥ್ವಿಯ ಮೇಲೆ ಬೆಳಕು ತೇಜಸ್ವಿಮಯವಾಗಿತ್ತು.ಪೂಜೆ ವೇದ ಮತ್ತು ಮಂತ್ರ ಪಠಣಗಳಿಂದ ಈ ಪ್ರಥ್ವಿಯೂ ಪವಿತ್ರವಾಗಿತ್ತು.ಯೋಗ ಶಕ್ತಿಗಳಿಂದ ಈ ಪ್ರಥ್ವಿಯನ್ನ ಪವಿತ್ರ ಆತ್ಮಗಳು ಸಂಭಾಳಿಸುತ್ತಿದ್ದವು.ಇವತ್ತಿನಿಂದ ಆರುಸಾವಿರ ವರ್ಷಗಳ ಹಿಂದೆ ಕಲಿಯುಗದ ಆರಂಭವಾಯಿತು.ಕಲಿ ಜನಗಳಲ್ಲಿ ಪ್ರವೇಶಮಾಡಿದ ,ವಿಚಾರಗಳು ವಿಕಾರದಲ್ಲಿ ಬದಲಾದವು.ಇಂದು ಎಲ್ಲ ರೀತಿಯ ವಿಕಾರಗಳಿಂದ ಪ್ರಥ್ವಿ ದ್ರಷ್ಟವಾಗುತ್ತಿದೆ.ಅತ್ಯಾಚಾರ ಬೆಳೆದು ನಿಂತಿದೆ ಮಾನವಿಯತೆ ದಿನದಿನವೂ ಸಾಯುತ್ತಿದೆ.ಪ್ರತಿ ದಿನವೂ ಹೆಚ್ಚುತ್ತಿರುವ ಕ್ರೋಧ & ಅತ್ಯಾಚಾರಗಳಿಂದ ಈ ಪ್ರಥ್ವಿಯೂ ನಡುಗುತ್ತಿದೆ ರಕ್ತದ ಆಹಾಕಾರವಾಗುತ್ತಿದೆ. ಎಲ್ಲಕಡೆಯಲ್ಲೂ ಕತ್ತಲು ಪ್ರತಿಕ್ಷಣವೂ ಕೇವಲ ಕತ್ತಲು .ಈ ಅಂಧಕಾರದ ಸಾಮ್ರಾಜ್ಯದಲ್ಲಿ ಮಾನವೀಯತೆಯನ್ನು ಅನ್ಯಾಯದಿಂದ ಅತ್ಯಾಚಾರದಿಂದ ರಕ್ಷಿಸಲು ಜನ್ಮಗೊಂಡ ಒಂದು ಸೂರ್ಯನ ಅಂಶ.ಹಿನ್ನಲೆಯ
 ಧ್ವನಿಯಲ್ಲಿ ಇಷ್ಟು ಧ್ವನಿ ಉರಳುತ್ತಿದ್ದಂತೆ ಮೊದಲು ದ್ರಶ್ಯ ಶುರುವಾಗತ್ತೆ ವ್ಯಕ್ತಿಯೊಬ್ಬ ಯಜ್ಞದ ಮುಂದೆ ಕುಳಿತು ಹವನವನ್ನು ಮಾಡುತ್ತ ಗಾಯತ್ರಿ ಮಂತ್ರವನ್ನ ಹೇಳುತ್ತಿರುತ್ತಾನೆ.ಯಜ್ಞಾಹುತಿ ಮುಗಿಯುತ್ತಿದ್ದಂತೆ ಎದ್ದು ನಿಂತು ಗುರುಗಳಿಗೆ ಪ್ರಣಾಮವನ್ನು ಮಾಡುತ್ತಾನೆ .ಒಂದಿಷ್ಟು ಮಾತುಗಳ ನಂತರ ಗುರು ಹೇಳ್ತಾನೆ ನೀನಿಗ ಪಂಚಮಹಾಭೂತ ಯಾತ್ರೆಯನ್ನ ಕೈಗೊಳ್ಳಬೇಕು.ನಿನ್ನ ಯೋಗದ ಶಕ್ತಿಯ ಮೂಲಕ ಪಂಚಮಹಾಭೂತಗಳಲ್ಲಿ ವಿಭಕ್ತವಾಗಬೇಕು.ನೀನು ಈ ಕಾರ್ಯಕ್ಕೆ ಶಖ್ಯವಾಗಿದಿಯ ನಿನ್ನ ಕುಂಡಲಿನಿ ಪರಿಪೂರ್ಣ ಜಾಗ್ರತವಾಗಿದೆ.ಆತ ಗುರುಗಳ ಅಪ್ಪಣೆಯಂತೆ  ಯಜ್ಞದಲ್ಲಿ  ಕುಳಿತು ತನ್ನನ್ನು ತಾನು ವಿಭಕ್ತಗೊಳಿಸಿ ಗುರುವಿನ ಒಂದೊಂದೇ ಆಜ್ನ್ಯೆಯನ್ನು ಪಾಲಿಸುತ್ತಾ ಪಂಚಮಹಾಭೂತಗಳಿಂದ ತನ್ನ ಶಕ್ತಿಯನ್ನ ಸಂಪಾದಿಸುತ್ತ ಸಾಗುತ್ತಾನೆ. ಮುಂದಿನ ದ್ರಶ್ಯ ಸಾಗುತ್ತೆ.
ಭೂಮಿಯು ಸ್ಥಾಯಿತ್ವ ,ಆಧಾರ ಮತ್ತು ಸ್ನೇಹಶೀಲತೆಯನ್ನು ನೀಡುತ್ತೆ ,ಇದರಂತೆ ನೀನು ಧೀರ ಶೀಲ ಮತ್ತು ಸ್ಥಿರವಾಗು.
ವಾಯುವು -ಪ್ರಾಣಶಕ್ತಿ ,ಸ್ವರ ಮತ್ತು ನಾದವಾಗಿದೆ ಇದರಿಂದ ನೀನು ವಾಯುವಿನ ತರ ತಿವ್ರಗಾಮಿ ಮತ್ತು ನಿನ್ನ ಶ್ರವಣ ಶಕ್ತಿ ಅಭೂತಪೂರ್ಣವಾಗುವುದು.
ಅಗ್ನಿ - ಶಕ್ತಿ ಮತ್ತು ಪ್ರಚಂಡವಾಗಿದೆ ,ಪವಿತ್ರವಾಗಿದೆ ,ಕ್ರೋಧವಾಗಿದೆ ಇದರಿಂದ ಸಂಚರಿಸಿ ಯಾರು ಕೂಡ ಅಪವಿತ್ರವಾಗಿರುವದಿಲ್ಲ.ಇದನ್ನ ಪ್ರತೀಕದ ರೂಪದಲ್ಲಿ ಸ್ವೀಕರಿಸು.
ನೀರು ಜೀವನವಾಗಿದೆ ,ನಿರ್ಮಲವಾಗಿದೆ, ಪ್ರಶಾಂತವಾಗಿದೆ. ನೀರು ಅನಶ್ವರವಾಗಿದೆ ಇದನ್ನು ಪ್ರತೀಕವಾಗಿ ಸ್ವೀಕರಿಸಿ ನೀನು ಜೀವನ ರಕ್ಷಕನಾಗು 
ಆಕಾಶದ- ಆಳವು ಜ್ನ್ಯಾನದ ರೀತಿಯಲ್ಲಿ ಅನಂತವಾಗಿದೆ ,ಬ್ರಹ್ಮನ ತರ ವಿಶಾಲವಾಗಿದೆ ,ಶೂನ್ಯವಾಗಿದ್ದರು ಸಹ ಸಕಲ ಉತ್ಪತ್ತಿಗೆ ಕಾರಣವಾಗಿದೆ.ಈ ಗುಣಗಳನ್ನು ಮಹತ್ವವಾಗಿ ಪರಿಗಣಿಸಿ ಅದರಂತೆ ನೀನು ಬಣ್ಣ ಮತ್ತು ಆಕಾರದ ಬಂಧನಗಳಿಂದ ಮುಕ್ತನಾಗು.
ಹೀಗೆ ತಾನು ತನ್ನ ಯೋಗಶಕ್ತಿಯ ಮೂಲಕ ವಿಭಕ್ತನಾಗಿ ಪಂಚಭೂತಗಳಿಂದ ಒಂದೊಂದು ಶಕ್ತಿಯನ್ನ ಪಡೆದು ಶಕ್ತಿಮಾನವನಾಗಿ ಬಂದು ನಮ್ಮ ಮುಂದೆ ನಿಲ್ಲುತ್ತಾನೆ.





ಇನ್ನೂ ಶಕ್ತಿಮಾನದೂ ಒಂದು ತೂಕವಾದರೆ ಅದರ ಶೀರ್ಷಿಕೆ ಗೀತೆಯ ತೂಕ ಇನ್ನೊಂದ ಕಡೆಗೆ.ನನಗಂತೂ ಶಕ್ತಿಮಾನಗಿಂತ ಈ ಹಾಡೇ ಬಲು ಅಚ್ಚುಮೆಚ್ಚು ಹಾಡಿನ ಒಂದೊಂದು ಸಾಲುಗಳು ಸಹ ಅದ್ಬುತ .ಬನ್ನಿ ಹಾಡಿನ ಅರ್ಥವನ್ನ ನೋಡೋಣ .
ಹಾಡಿನ ಮೊದಲನೇ ಚರಣದಲ್ಲಿ ಹೀಗಿದೆ 
अदभुत अदम्य साहस की परिभाषा है
ये मिटती मानवता की आशा है
ये श्रृष्टि की शक्ति का वरदान है
ये अवतार नहीं है ये इंसान है
ಅರ್ಥ -ಅದ್ಬುತ ಅದಮ್ಯ ಸಾಹಸದ ಮೂರ್ತಿಯಾಗಿದ್ದಾನೆ,ನಶಿಸಿಹೋಗುತ್ತಿರುವ ಮಾನವಿತೆಯ ಆಶಾಕಿರಣವಾಗಿದ್ದಾನೆ,ಇದು ಸ್ರಷ್ಟಿಯ ಶಕ್ತಿಯ ವರದಾನವಾಗಿದೆ ,ಇದು ಯಾವದೇ ಅವತಾರವಲ್ಲ ಸಾಮಾನ್ಯ ಮನುಷ್ಯನಾಗಿದ್ದಾನೆ.

ಎರಡನೇ ಚರಣದಲ್ಲಿ ಹೀಗಿದೆ
ये आत्मशक्ति है
दुनिया बदल सकती है
फूलों में ढल सकती है
शोलों सी जल सकती है
होता है जब आदमी को
अपना ज्ञान.. कहलाया वो शक्तिमान
ಇದು ಆತ್ಮಶಕ್ತಿಯಾಗಿದೆ,ಜಗತ್ತನ್ನು ಬದಲಾಯಿಸಬಹುದು,ಹೂವಿನಲ್ಲಿ ಒಂದಾಗಬಹುದು, ಬೆಂಕಿಯಂತೆ ಧಗ ಧಗಿಸಬಹುದು,ಯಾವಾಗ ಮನುಷ್ಯನಿಗೆ ತನ್ನ ಜ್ನ್ಯಾನದ ಪರಿಚಯವಾಗತ್ತೋ ಆಗ ಆತ ಶಕ್ತಿಮಾನ್ ಎನಿಸಿಕೊಳ್ತಾನೆ.

ಶಕ್ತಿಮಾನ್ ಶಕ್ತಿಗಳನ್ನ ಪಡೆದುಕೊಂಡ ರೀತಿ ,ಶೀರ್ಷಿಕೆಯ ಹಾಡು ಮತ್ತು ಒಂದಿಷ್ಟು ಸರಣಿಗಳನ್ನು ನೋಡಿದಾಗ ಸ್ಪಷ್ಟವಾಗಿ ಅರ್ಥವಾಗತ್ತೆ ನಿರ್ದೇಶಕ ಯಾವುದನ್ನು ಹೇಳಲು ಹೊರಟಿದ್ದಾನೆ ಅಂತ.ಈ ಕಲಿಯುಗದ ಅಂಧಕಾರದಲ್ಲಿ ಬೇಕಾಗಿರುವದು ಸತ್ಯದ ಬೆಳಕು ಅದು ಕೇವಲ ನಮ್ಮಿಂದ ಮತ್ತು ಆಧ್ಯಾತ್ಮದ ಚಿಂತನೆಯಿಂದ ಮಾತ್ರ ಸಾಧ್ಯ.ಶೀರ್ಷಿಕೆಯ ಗೀತೆಯ ಒಟ್ಟು ಸಾರಾಂಶ ಶಕ್ತಿಮಾನ್ ಯಾವದೇ ಅವತಾರ ಪುರಷನಲ್ಲ ಸಾಮಾನ್ಯ ಮನುಷ್ಯ ,ಸಕಲ ಶಕ್ತಿಯು ಕೂಡ ಮನುಷ್ಯನ ಅಂತರಾಳದಲ್ಲಿ ಅಡಗಿ ಕೂತಿದೆ ಅದನ್ನ ಕಂಡುಕೊಳ್ಳುವ ಪ್ರಯತ್ನವನ್ನ ಮಾಡಬೇಕು,ಅದರಲ್ಲಿ ಸಫಲನಾದಾಗ ಮನುಷ್ಯ ಶಕ್ತಿಮಾನವನಾಗುತ್ತಾನೆ. ಹೀಗೆ ಲೋಕ ಕಲ್ಯಾಣಕ್ಕಾಗಿ ಶಕ್ತಿಗಳನ್ನ ಗಳಿಸಿಕೊಂಡ ಯೋಗಿಯೂ ಜಗತ್ತನ್ನೇ ಆಳಬಹುದು. ಒಂದು ಸೂಪರ್ ಹೀರೊನ ಕಥೆಯನ್ನು ಹೆಣೆಯಬೇಕಾದ್ರು  ಸಹ ಇಷ್ಟೊಂದು ಅಚ್ಚುಕಟ್ಟಾಗಿ ,ವಾಸ್ತವಕ್ಕೆ ಹತ್ತಿರವಾಗಿ ತಯಾರಿಸುವುದಕ್ಕೆ ಸಾಧ್ಯವಿರುವದು ಭಾರತಕ್ಕೆ ಮಾತ್ರ.ಭಾರತದ ಶಕ್ತಿಯೇ ಆಧ್ಯಾತ್ಮ .ಇದನ್ನೆಲ್ಲ ನೋಡಿದ ಮೇಲೆ ನನಗೆ ಉತ್ತರವಂತೂ ದೊರೆತಿತ್ತು ಜೊತೆಗೆ ಅರ್ಥವಾಗಿದ್ದು ಎರಡು ವಿಚಾರ ಮೊದಲನೆಯದು ಶಕ್ತಿಮಾನ್ ಕೂಡ ಕೋಮುವಾದಿಯೇ😜.ಎರಡನೆಯದು ಕರೋನ ಎಂಬ ಅಂಧಕಾರದಿಂದ ಈ ದೇಶವನ್ನ ರಕ್ಷಿಸುತ್ತಿರುವ ನಮ್ಮ ಮೋದಿ ಕೂಡ ಶಕ್ತಿಮಾನ್.


Pavan Hebbare 
Mundgod